ಜೇನು ಕೊನೆಯಾದರೆ ಒಂದರ್ಥದಲ್ಲಿ ನಮ್ಮ ಬದುಕೂ ಕೊನೆಯಾದಂತೆಯೇ: ಮೇ 20: ವಿಶ್ವ ಜೇನುನೊಣ ದಿನದ ವಿಶೇಷ ಲೇಖನ:

ಮೇ 20: ವಿಶ್ವ ಜೇನುನೊಣ ದಿನ-2023 ವಿಶೇಷ ಲೇಖನ:

ಪ್ರತಿ ವರ್ಷದಂತೆ ವಿಶ್ವ ಜೇನುನೊಣ ದಿನ 2023 ಅನ್ನು ಈ ವರ್ಷ ಮೇ 20 ರಂದು ಆಚರಿಸಲಾಗುತ್ತಿದೆ. ವಿಶ್ವ ಜೇನುನೊಣ ದಿನದ ಥೀಮ್ 2023 ರ ವಿವರಗಳು, ಉದ್ದೇಶ ಮತ್ತು ದಿನಾಂಕ. ತಿಳಿಯಲು ಮುಂದೆ ಓದಿ.

ಮನುಷ್ಯನ ಬದುಕಿನ ಎಲ್ಲಾ ಸ್ತರದಲ್ಲೂ ಜೇನಿಗೆ ಅದರದ್ದೇ ಆದ ಮಹತ್ವವಿದೆ. ಜೇನುನೊಣಗಳಿಲ್ಲದಿದ್ದರೆ ಮನುಷ್ಯನ ಆಹಾರಕ್ಕೂ ಕಷ್ಟಪಡಬೇಕಾದ ಸ್ಥಿತಿ ಇದೆ. ಜೇನು ಕೊನೆಯಾದರೆ ಒಂದರ್ಥದಲ್ಲಿ ನಮ್ಮ ಬದುಕೂ ಕೊನೆಯಾದಂತೆಯೇ. ಆದರೆ, ಇಂತಹ ಮಹತ್ವದ ಜೀವಗಳಿಗೇ ಈಗ ಸಂಚಕಾರ ಬಂದಿದೆ. ಇತ್ತೀಚಿಗೆ ಹತ್ತಿಪ್ಪತ್ತು ವರ್ಷಗಳಿಂದ ಜೇನುನೊಣಗಳು ಕಣ್ಮರೆಯಾಗುತ್ತಿವೆ.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ವೇದಕಾಲದಲ್ಲಿಯೇ ಭಾರತೀಯರಲ್ಲಿ ಜೇನಿನ ಬಗ್ಗೆ ಹೆಚ್ಚಿನ ಅರಿವು ಇತ್ತು ಎಂಬುದು ಅಥರ್ವಣ ವೇದದ ಮಧುಸೂಕ್ತದಿಂದ ಕಂಡುಬರುವುದು. “ಮಧುಮತೀ ರೋಷಧೀರ್ದ್ಯಾಪ ಆಪೋ ಮಧುವನ್ನೋ ಭವತ್ವಂತರಿಕ್ಷಂ ಕ್ಷೇತ್ರಸ್ಯ ಪತಿರ್ಮಧುಮಾನ್ನೋ ಅಸ್ಟ್ತರಿಷ್ಯಂತೋ ಅನ್ವೇನಂ ಚರೇಮ. ಪನ್ನಾಯ್ಯಂ ತದಶ್ಚಿನಾ ಕೃತಂವಾ ವೃಷಭೋ ದಿವೋ ರಜಸ ಪೃಥಿವ್ಯಾಃ. ಸಹಸ್ರಂ ಶಂಸಾ ಎತಯೇ ಗವಿಷ್ಟೌ ಸರ್ವಾಂ ಇತ ತಾಂ ಉಪಯತಾ ಪಿಬದ್ದ್ಯೆ.” ಎಂದು ವರ್ಣಿಸಲಾಗಿದೆ.

ಕ್ರಮೇಣ ನಾಗರೀಕತೆ ಬೆಳೆದಂತೆ ಕೌತುಕ ಕಾರಕ ಈ ಜೇನು ವಿಜ್ಞಾನದ ಅರಿವು ಅಲ್ಲಲ್ಲಿ ಆರಂಭವಾಯಿತು ಎನ್ನಬಹುದು. ಜೇನು ಹಾಗೂ ಜೇನು ಹುಳುಗಳು ಮಾನವ ಸಂಕುಲಕ್ಕೆ ಪ್ರಕೃತಿ ದತ್ತವಾಗಿ ಸಿಕ್ಕಿರುವ ವರ. ಜೇನುನೊಣಗಳು ಮತ್ತು ಬಾವಲಿಗಳು, ಚಿಟ್ಟೆಗಳಂತಹ ಇತರ ಪರಾಗಸ್ಪರ್ಶಕಗಳು ಕ್ರಮೇಣ ಮಾನವ ಚಟುವಟಿಕೆಗಳಿಂದಾಗಿ ಅಳಿವಿನ ಅಂಚಿನಲ್ಲಿ ಅಪಾಯದಲ್ಲಿದೆ. ತಜ್ಞರ ಪ್ರಕಾರ, ನಮ್ಮ ಪರಿಸರ ವ್ಯವಸ್ಥೆಯ ಉಳಿವು ಹೆಚ್ಚಾಗಿ ಪರಾಗಸ್ಪರ್ಶದ ಮೂಲಭೂತ ಪ್ರಕ್ರಿಯೆಯ ಮೇಲೆ ಅವಲಂಬಿತವಾಗಿರುತ್ತದೆ. ಹೂಬಿಡುವ ಹೆಚ್ಚಿನ ಸಸ್ಯ ಪ್ರಭೇದಗಳು ಸಂಪೂರ್ಣವಾಗಿ ಅಥವಾ ಭಾಗಶಃ ಪ್ರಾಣಿಗಳ ಪರಾಗಸ್ಪರ್ಶವನ್ನು ಅವಲಂಬಿಸಿವೆ. ಅಷ್ಟೇ ಅಲ್ಲ, ಪರಾಗಸ್ಪರ್ಶಕಗಳು ಆಹಾರ ಸುರಕ್ಷತೆ ಮತ್ತು ಜೀವವೈವಿಧ್ಯತೆಯನ್ನು ಸಂರಕ್ಷಿಸಲು ಸಹಕರಿಸುತ್ತವೆ.

ಆದ್ದರಿಂದ ಪರಾಗಸ್ಪರ್ಶಕಗಳ ಪ್ರಾಮುಖ್ಯತೆ, ಅವರು ಎದುರಿಸುತ್ತಿರುವ ಬೆದರಿಕೆಗಳು ಮತ್ತು ಸುಸ್ಥಿರ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆಗಳ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ಜೇನುನೊಣ ದಿನವನ್ನು ಆಚರಿಸಲಾಗುತ್ತದೆ. ಪ್ರತಿ ವರ್ಷದಂತೆ ವಿಶ್ವ ಜೇನುನೊಣ ದಿನಾಚರಣೆ 2023 ಅನ್ನು ಈ ಬಾರಿ ಮೇ 20 ರಂದು ಆಚರಿಸಲಾಗುತ್ತಿದೆ.

ವಿಶ್ವ ಜೇನುನೊಣ ದಿನಾಚರಣೆ 2023 ರ ಮಹತ್ವ:

ಮೊದಲ ಬಾರಿಗೆ ವಿಶ್ವ ಜೇನುನೊಣ ದಿನವನ್ನು ಮೇ 20, 2018 ರಂದು ವಿಶ್ವದಾದ್ಯಂತ ಆಚರಿಸಲಾಯಿತು. ಜೇನುಸಾಕಣೆದಾರರು, ಪರಿಸರ ಗುಂಪುಗಳು, ವಿಜ್ಞಾನಿಗಳು, ಶಿಕ್ಷಕರು ಮತ್ತು ಜೇನುನೊಣ ಸಂರಕ್ಷಣೆಯ ಬಗ್ಗೆ ಆಳವಾಗಿ ಕಾಳಜಿ ವಹಿಸುವವರು ಈವೆಂಟ್‌ನಲ್ಲಿ ಉತ್ಸಾಹದಿಂದ ಭಾಗವಹಿಸಿದರು. ಇದು ಜೇನುನೊಣಗಳತ್ತ ಗಮನ ಸೆಳೆಯಲು ಅವಕಾಶವನ್ನು ನೀಡಿತು ಮತ್ತು ಆಹಾರ ಉತ್ಪಾದನೆ, ಜೀವವೈವಿಧ್ಯ ಮತ್ತು ಪರಿಸರ ವ್ಯವಸ್ಥೆಗಳ ಸುಸ್ಥಿರತೆಯಲ್ಲಿ ಅವುಗಳ ನಿರ್ಣಾಯಕ ಭಾಗವಾಗಿದೆ.

ಪ್ರಾರಂಭದಿಂದಲೂ, ವಿಶ್ವ ಜೇನುನೊಣ ದಿನವು ಪ್ರಪಂಚದಾದ್ಯಂತ ಜನಪ್ರಿಯತೆ ಮತ್ತು ಜನರ ಪಾಲ್ಗೊಳ್ಳುವಿಕೆಯಲ್ಲಿ ಬೆಳೆದಿದೆ. ಈ ಆಚರಣೆಯು ಜೇನುನೊಣ-ಸ್ನೇಹಿ ನಡವಳಿಕೆಗಳನ್ನು ಉತ್ತೇಜಿಸಲು, ಜೇನುನೊಣಗಳ ಸಂಖ್ಯೆ ಕ್ಷೀಣಿಸುವ ಅಪಾಯಗಳ ಬಗ್ಗೆ ಸಾರ್ವಜನಿಕ ಜಾಗೃತಿಯನ್ನು ಹೆಚ್ಚಿಸಲು ಮತ್ತು ಸಂರಕ್ಷಣಾ ಪ್ರಯತ್ನಗಳನ್ನು ಉತ್ತೇಜಿಸಲು ವೇದಿಕೆಯನ್ನು ಒದಗಿಸುತ್ತದೆ. ವಿಶ್ವ ಜೇನುನೊಣ ದಿನದ ಚಟುವಟಿಕೆಗಳನ್ನು ಹೆಚ್ಚಾಗಿ ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (FAO) ಆಯೋಜಿಸುತ್ತದೆ. ಜೇನುನೊಣಗಳ ಮೌಲ್ಯವನ್ನು ಎತ್ತಿ ತೋರಿಸುವ ಘಟನೆಗಳು, ಪ್ರಚಾರಗಳು ಮತ್ತು ಶೈಕ್ಷಣಿಕ ಚಟುವಟಿಕೆಗಳನ್ನು ಯೋಜಿಸಲು, ಅವರು ಜೇನುಸಾಕಣೆ ಗುಂಪುಗಳು, ಸರ್ಕಾರಿ ಸಂಸ್ಥೆಗಳು ಮತ್ತು ಸರ್ಕಾರೇತರ ಸಂಸ್ಥೆಗಳು ಸೇರಿದಂತೆ ಹಲವಾರು ಪಾಲುದಾರರೊಂದಿಗೆ ನಿಕಟವಾಗಿ ಸಹಕರಿಸುತ್ತಾರೆ.

ವಿಶ್ವ ಜೇನುನೊಣ ದಿನದ ಹಾಗೂ ಈ ದಿನಾಂಕ ಮತ್ತು ಉದ್ದೇಶ ಏಕೆ?
ಮೇ 20 ರಂದು, ಜೇನುಸಾಕಣೆಯ ಪ್ರವರ್ತಕ ಆಂಟನ್ ಜಾನ್ಸಾ 1734 ರಲ್ಲಿ ಸ್ಲೊವೇನಿಯಾದಲ್ಲಿ ಜನಿಸಿದರು, ಆದ್ದರಿಂದ ಪ್ರತಿ ವರ್ಷ ವಿಶ್ವ ಜೇನುನೊಣ ದಿನವೆಂದು ಆಚರಿಸಲಾಗುತ್ತದೆ. ವಿಶ್ವಸಂಸ್ಥೆಯಿಂದ ಅನುಮೋದಿಸಲ್ಪಟ್ಟ, ಮೊದಲ ವಿಶ್ವ ಜೇನುನೊಣ ದಿನವನ್ನು ಮೇ 20, 2018 ರಂದು ಆಚರಿಸಲಾಯಿತು. ವಿಶ್ವ ಜೇನುನೊಣ ದಿನ 2023 ಈ ವರ್ಷದ ಮೇ 20 ಶನಿವಾರದಂದು ಬರುತ್ತದೆ. ವಿಶ್ವ ಜೇನುನೊಣ ದಿನದ ಉದ್ದೇಶ, ಪರಿಸರ ವ್ಯವಸ್ಥೆಯಲ್ಲಿ ಜೇನುನೊಣಗಳ ಪಾತ್ರವನ್ನು ಅಂಗೀಕರಿಸುವುದು. ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು 2017 ರ ಡಿಸೆಂಬರ್‌ನಲ್ಲಿ ವಿಶ್ವ ಜೇನುನೊಣ ದಿನಾಚರಣೆಯ ಪ್ರಸ್ತಾಪವನ್ನು ಅಂಗೀಕರಿಸಿದವು.

2023ರ ವಿಶ್ವ ಜೇನುನೊಣ ದಿನದ ಥೀಮ್:
“ಸುಸ್ಥಿರ ಕೃಷಿಗಾಗಿ ಜೇನುನೊಣಗಳು”

ವಿಶ್ವ ಜೇನುನೊಣ ದಿನವನ್ನು ಹೇಗೆ ಆಚರಿಸಲಾಗುತ್ತದೆ?
* ವಿಶ್ವ ಜೇನುನೊಣ ದಿನ 2023 ಅನ್ನು ಹೇಗೆ ಆಚರಿಸುವುದು.

* ನೀವೇ ಶಿಕ್ಷಣ ಮತ್ತು ಜೇನುನೊಣಗಳ ಬಗ್ಗೆ ಜಾಗೃತಿ ಮೂಡಿಸಿ.

* ಜೇನು ಸ್ನೇಹಿ ಉದ್ಯಾನಗಳನ್ನು ಆಯೋಜಿಸಿ.

* ಕೀಟನಾಶಕಗಳನ್ನು ತಪ್ಪಿಸಿ.

* ಬೀ ಹೋಟೆಲ್‌ಗಳು ಅಥವಾ ಗೂಡುಕಟ್ಟುವ ತಾಣಗಳನ್ನು ನಿರ್ಮಿಸಿ.

* ಸಮುದಾಯ ಈವೆಂಟ್‌ಗಳನ್ನು ಆಯೋಜಿಸಿ.

ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ‘ಮನ್ ಕಿ ಬಾತ್’ 75 ನೇ ಕಂತಿನ ಭಾಷಣದಲ್ಲಿ ಜೇನು ಸಾಕಾಣೆ ಬಗ್ಗೆ ಆಡಿದ ಮಾತುಗಳು:

“ಪ್ರೀತಿಯ ದೇಶವಾಸಿಗಳೇ, ಹೊಸತನ, ಆಧುನಿಕತೆ ಎನ್ನುವುದು ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಅನಿವಾರ್ಯವಾಗಿದೆ, ಇಲ್ಲದಿದ್ದರೆ, ಅದು ಕೆಲವೊಮ್ಮೆ ನಮಗೆ ಹೊರೆಯಾಗಿ ಪರಿಣಮಿಸುತ್ತದೆ. ಭಾರತದ ಕೃಷಿ ಜಗತ್ತಿನಲ್ಲಿ- ಆಧುನಿಕತೆ, ಎನ್ನುವುದು ಈ ಸಮಯದ ಬೇಡಿಕೆ, ಅಗತ್ಯವಾಗಿದೆ. ಈಗಾಗಲೇ ಬಹಳಷ್ಟು ತಡವಾಗಿದೆ. ನಾವು ಸಾಕಷ್ಟು ಸಮಯವನ್ನು ವ್ಯರ್ಥ ಮಾಡಿಕೊಂಡಿದ್ದೇವೆ. ಕೃಷಿ ಕ್ಷೇತ್ರದಲ್ಲಿ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಸಲುವಾಗಿ, ರೈತರ ಆದಾಯವನ್ನು ಹೆಚ್ಚಿಸುವ ಸಲುವಾಗಿ, ಸಾಂಪ್ರದಾಯಿಕ ಕೃಷಿಯ ಜೊತೆಗೆ ಹೊಸ ಆಯ್ಕೆಗಳು, ಹೊಸ ಆವಿಷ್ಕಾರಗಳನ್ನು ಅಳವಡಿಸಿಕೊಳ್ಳುವುದು ಕೂಡಾ ಅಷ್ಟೇ ಅಗತ್ಯವಾಗಿರುತ್ತದೆ. ಶ್ವೇತಕ್ರಾಂತಿಯ ರೂಪದಲ್ಲಿ, ದೇಶಕ್ಕೆ ಇದರ ಅನುಭವವಾಗಿದೆ.

ಈಗ ಜೇನುನೊಣ ಸಾಕಾಣಿಕೆ ಅಂತಹ ಒಂದು ಆಯ್ಕೆಯಾಗಿ ಹೊರಹೊಮ್ಮುತ್ತಿದೆ. ಜೇನುನೊಣ ಸಾಕಾಣಿಕೆ ಎನ್ನುವುದು ದೇಶದಲ್ಲಿ ಜೇನುಕ್ರಾಂತಿ ಅಥವಾ ಸಿಹಿ ಕ್ರಾಂತಿ ಆಧರಿತವಾಗಿದೆ. ಹೆಚ್ಚಿನ ಸಂಖ್ಯೆಯ ರೈತರು ಇದಕ್ಕೆ ಸೇರಿಕೊಳ್ಳುತ್ತಿದ್ದಾರೆ. ಆವಿಷ್ಕಾರ ಮಾಡುತ್ತಿದ್ದಾರೆ. ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‍ನಲ್ಲಿ ಗುರ್ದುಂ ಎಂಬ ಒಂದು ಗ್ರಾಮವಿದೆ. ಎತ್ತರದ ಪರ್ವತಗಳು, ಭೌಗೋಳಿಕ ಸಮಸ್ಯೆಗಳು ಇಲ್ಲಿವೆ, ಆದರೆ, ಇಲ್ಲಿನ ಜನರು ಜೇನುನೊಣ ಸಾಕಾಣಿಕೆ ಪ್ರಾರಂಭಿಸಿದರು ಮತ್ತು ಇಂದು, ಈ ಸ್ಥಳದಲ್ಲಿ ತಯಾರಿಸಿದ ಜೇನುತುಪ್ಪಕ್ಕೆ ಉತ್ತಮ ಬೇಡಿಕೆಯಿದೆ, ಜೇನು ಇಂದು ರೈತರ ಆದಾಯವನ್ನೂ ಹೆಚ್ಚಿಸುತ್ತಿದೆ.

ಪಶ್ಚಿಮ ಬಂಗಾಳದ ಸುಂದರ್ ಬನ್ಸ್ ಪ್ರದೇಶಗಳ ನೈಸರ್ಗಿಕ ಸಾವಯವ ಜೇನುತುಪ್ಪವನ್ನು ದೇಶವಿದೇಶಗಳಲ್ಲಿ ಜನರು ಇಷ್ಟ ಪಡುತ್ತಾರೆ. ಇಂತಹದ್ದೇ ಒಂದು ವ್ಯಕ್ತಿಗತ ಅನುಭವದ ಉದಾಹರಣೆ ನನಗೆ ಗುಜರಾತಿನಲ್ಲಿ ದೊರೆತಿದೆ. ಗುಜರಾತ್ನ ಬನಾಸ್ಕಾಂವತದಲ್ಲಿ 2016 ರಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಆ ಕಾರ್ಯಕ್ರಮದಲ್ಲಿ ನಾನು ಜನರಲ್ಲಿ ಹೀಗೆ ಕೇಳಿದ್ದೆ, ಇಲ್ಲಿ ಅನೇಕ ಸಂಭಾವ್ಯತೆಗಳಿವೆ, ಬನಾಸ್ಕಾಂತಾ ಮತ್ತು ಇಲ್ಲಿನ ನಮ್ಮ ರೈತರು ಸಿಹಿ ಕ್ರಾಂತಿಯ ಹೊಸ ಅಧ್ಯಾಯವನ್ನು ಏಕೆ ಬರೆಯಬಾರದು? ಇಷ್ಟು ಕಡಿಮೆ ಸಮಯದಲ್ಲಿ ಜೇನು ಉತ್ಪಾದನೆಗೆ ಬನಾಸ್ಕಾಂತ ಪ್ರಮುಖ ಕೇಂದ್ರವಾಗಿದೆ ಎಂದು ಕೇಳಿ ನಿಮಗೆ ನಿಜಕ್ಕೂ ಸಂತೋಷವಾಗುತ್ತದೆ. ಇಂದು ಬನಾಸ್ಕಾಂತದಲ್ಲಿರುವ ರೈತರು ಜೇನುತುಪ್ಪದಿಂದ ವಾರ್ಷಿಕ ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಅಂತಹದ್ದೇ ಮತ್ತೊಂದು ಉದಾಹರಣೆ ಹರಿಯಾಣದ ಯಮುನಾ ನಗರದಲ್ಲಿಯೂ ಇದೆ. ಯಮುನಾ ನಗರದಲ್ಲಿ, ರೈತರು ಜೇನುನೊಣ ಸಾಕಾಣಿಕೆಯಿಂದ, ವಾರ್ಷಿಕವಾಗಿ ನೂರಾರು ಟನ್‌ ಜೇನುತುಪ್ಪವನ್ನು ಉತ್ಪಾದಿಸುತ್ತಿದ್ದಾರೆ, ಇದರಿಂದ ಅವರ ಆದಾಯ ಹೆಚ್ಚಾಗುತ್ತಿದೆ. ರೈತರ ಈ ಕಠಿಣ ಪರಿಶ್ರಮದ ಫಲವಾಗಿ, ದೇಶದಲ್ಲಿ ಜೇನುತುಪ್ಪದ ಉತ್ಪಾದನೆಯು ನಿರಂತರವಾಗಿ ಹೆಚ್ಚುತ್ತಿದೆ ಮತ್ತು ಇದು ವಾರ್ಷಿಕವಾಗಿ ಸುಮಾರು ಒಂದೂ ಕಾಲು ಲಕ್ಷ ಟನ್‌ ತಲುಪಿದೆ,  ಜೇನುತುಪ್ಪವನ್ನು ದೊಡ್ಡ ಪ್ರಮಾಣದಲ್ಲಿ ರಫ್ತು ಕೂಡಾ ಮಾಡಲಾಗುತ್ತಿದೆ.

ಸ್ನೇಹಿತರೇ, ಜೇನುನೊಣ ಸಾಕಾಣಿಕೆಯಿಂದ ಕೇವಲ ಜೇನುತುಪ್ಪದಿಂದ ಆದಾಯ ಬರುವುದು ಮಾತ್ರವಲ್ಲದೇ,  ಜೇನು ಮೇಣವೂ ಸಹ ಒಂದು ಬೃಹತ್ ಆಂದಾಯದ ಮೂಲವಾಗಿದೆ. ಔಷಧ ಉದ್ಯಮ, ಆಹಾರೋದ್ಯಮ, ಜವಳಿ ಮತ್ತು ಸೌಂದರ್ಯ ವರ್ಧಕ ಉದ್ಯಮ ಹೀಗೆ ಹಲವೆಡೆ ಜೇನುಮೇಣಕ್ಕೆ ಬೇಡಿಕೆ ಇದೆ. ನಮ್ಮ ದೇಶ ಪ್ರಸ್ತುತ ಜೇನು ಮೇಣವನ್ನು ಆಮದು ಮಾಡಿಕೊಳ್ಳುತ್ತಿದೆ, ಆದರೆ ನಮ್ಮ ರೈತರು, ಈಗ ಈ ಪರಿಸ್ಥಿತಿಯನ್ನು ತ್ವರಿತಗತಿಯಲ್ಲಿ ಬದಲಾಯಿಸುತ್ತಿದ್ದಾರೆ. ಅಂದರೆ, ಒಂದು ರೀತಿಯಲ್ಲಿ ಸ್ವಾವಲಂಬಿ ಭಾರತ ಅಭಿಯಾನಕ್ಕೆ ಸಹಾಯ ಮಾಡುತ್ತಿದ್ದಾರೆ. ಇಂದು ಇಡೀ ಜಗತ್ತು ಆಯುರ್ವೇದ ಮತ್ತು ನೈಸರ್ಗಿಕ ಆರೋಗ್ಯ ಉತ್ಪನ್ನಗಳತ್ತ ನೋಡುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ಜೇನುತುಪ್ಪದ ಬೇಡಿಕೆ ಮತ್ತಷ್ಟು ವೇಗವಾಗಿ ಹೆಚ್ಚುತ್ತಿದೆ. ದೇಶದ ಹೆಚ್ಚು ಹೆಚ್ಚು ರೈತರು ತಮ್ಮ ವ್ಯವಸಾಯದ ಜೊತೆಜೊತೆಗೆ ಜೇನು ನೊಣ ಸಾಕಾಣಿಕೆಗೆ ಸೇರಬೇಕೆಂದು ನಾನು ಬಯಸುತ್ತೇನೆ. ಇದು ರೈತರ ಆದಾಯವನ್ನು ಹೆಚ್ಚಿಸುತ್ತದೆ ಮತ್ತು ಅವರ ಜೀವನಕ್ಕೆ ಸಿಹಿ ಮಾಧುರ್ಯವನ್ನೂ ತುಂಬುತ್ತದೆ.”

ವಿಶ್ವ ಜೇನುನೊಣ ದಿನದ ಉಲ್ಲೇಖಗಳು:

“ಜೇನುನೊಣಗಳ ಗುಂಗು ಉದ್ಯಾನದ ಧ್ವನಿಯಾಗಿದೆ”- ಎಲಿಜಬೆತ್ ಲಾರೆನ್ಸ್

“ಜೇನುನೊಣವು ಇತರ ಪ್ರಾಣಿಗಳಿಗಿಂತ ಹೆಚ್ಚು ಗೌರವಾನ್ವಿತವಾಗಿದೆ, ಅವಳು ಕೆಲಸ ಮಾಡುವುದರಿಂದ ಅಲ್ಲ, ಆದರೆ ಅವಳು ಇತರರಿಗಾಗಿ ಕೆಲಸ ಮಾಡುವುದರಿಂದ” – St. ಜಾನ್ ಕ್ರಿಸೊಸ್ಟೊಮ್

“ಜೇನುನೊಣವು ತೋರುವಷ್ಟು ಕಾರ್ಯನಿರತವಾಗಿರುವುದಿಲ್ಲ; ಅದು ನಿಧಾನವಾಗಿ ಸದ್ದು ಮಾಡುವಂತಿಲ್ಲ” -ಕಿನ್ ಹಬಾರ್ಡ್

“ಸುಂದರವಾದ ಹೂವುಗಳು ನನಗೆ ಮುಜುಗರವನ್ನುಂಟುಮಾಡುತ್ತವೆ, ನಾನು ಜೇನುನೊಣವಲ್ಲ ಎಂದು ವಿಷಾದಿಸುವಂತೆ ಮಾಡುತ್ತದೆ” -ಎಮಿಲಿ ಡಿಕಿನ್ಸನ್

“ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ನಾನು ಪ್ರೀತಿಯ ಕ್ರೂರ ಹುಚ್ಚುತನದಿಂದ ಪಲಾಯನ ಮಾಡುತ್ತೇನೆ – ವಿಷ-ಹೂವುಗಳ ಜೇನುತುಪ್ಪ ಮತ್ತು ಎಲ್ಲಾ ಅಳತೆಯಿಲ್ಲದ ಅನಾರೋಗ್ಯ” – ಟೆನ್ನಿಸನ್

“ಜೇನುನೊಣಗಳು ಕುಟುಕುಗಳನ್ನು ಹೊಂದಿರುವ ಕಾರಣ ಜೇನುಗೂಡುಗಳನ್ನು ದೂರವಿಡುವ ಜೇನು-ಬಾಚಣಿಗೆಗೆ ಅವನು ಯೋಗ್ಯನಲ್ಲ”-ವಿಲಿಯಂ ಶೇಕ್ಸ್ಪಿಯರ್

“ಜೇನು ಗೂಡಿಗೆ ಯಾವುದು ಒಳ್ಳೆಯದಲ್ಲವೋ ಅದು ಜೇನುನೊಣಗಳಿಗೆ ಒಳ್ಳೆಯದಲ್ಲ” – ಮಾರ್ಕಸ್ ಆರೆಲಿಯಸ್

ಜೇನುಸಾಕಣೆದಾರರಲ್ಲಿ ಮಹಿಳೆಯರ ಸಂಖ್ಯೆ ಕಡಿಮೆಯೆಂದೇ ಹೇಳಬಹುದು. ಸಾಮಾನ್ಯವಾಗಿ ಜೇನುಹುಳು ಎಂದರೆ ಹೆದರುವ ಹೆಂಗಸರೇ ಹೆಚ್ಚು. ಮನೆಯಲ್ಲೇ ಇರುವ ಮಹಿಳೆಯರಿಗೆ ಹೇಳಿ ಮಾಡಿಸಿದ ಉದ್ಯೋಗ ಜೇನು ಕೃಷಿ. ಜೇನುಸಾಕಣೆ ಲಾಭದಾಯಕ ಉಪಕಸುಬು. ಇದಕ್ಕೆ ಕಾಲೇಜು ಡಿಗ್ರಿ ಬೇಡ. ಮುಖ್ಯವಾಗಿ ಬೇಕಾಗಿರುವುದು ಮನಸ್ಸು ಮತ್ತು ಜೇನುಹುಳುಗಳ ಮೇಲೆ ಪ್ರೀತಿ ಅಷ್ಟೆ. ಅಂಗೈ ಅಗಲ ಜಾಗ ಇದ್ದರೂ ಸಾಕು, ಜೇನು ಬೇಸಾಯ ಮಾಡಬಹುದು. ಒಂದೆರಡು ಜೇನುಪೆಟ್ಟಿಗೆಗಳನ್ನು ಇಟ್ಟರೆ ಮನೆಗೆ ಬೇಕಾದಷ್ಟು ಜೇನುತುಪ್ಪ ಉತ್ಪಾದಿಸಬಹುದು. ಹತ್ತು ಅಥವಾ ಅದಕ್ಕಿಂತ ಹೆಚ್ಚು ಪೆಟ್ಟಿಗೆ ಇಟ್ಟರೆ ದುಡ್ಡು ಸಂಪಾದಿಸಬಹುದು. ರೈತಮಹಿಳೆಯರು ದುಡ್ಡಿನ ಜೊತೆಗೆ ಜಮೀನಿನಲ್ಲಿ ಗುಣಮಟ್ಟದ ಬೆಳೆ ಪಡೆಯಬಹುದು. ಮಹಿಳೆಯರು ಹವ್ಯಾಸವಾಗಿಯೂ ಈ ವೃತ್ತಿಯನ್ನು ಕೈಗೊಳ್ಳಬಹುದು. ಜೇನುತುಪ್ಪ ತಿನ್ನಲು ಸವಿ, ಆರೋಗ್ಯಕ್ಕೂ ಉತ್ತಮ. ಹಲವಾರು ಜೇನು ಸಾಕಾಣಿಕೆ ಔಷಧೀಯ ಗುಣಗಳನ್ನು ಹೊಂದಿದೆ. ಮಧುಮೇಹಿಗಳೂ ಜೇನು ತಿನ್ನಬಹುದು.

ಜೇನು ಸಾಕಾಣಿಕೆಯು ಕೃಷಿಯ ಅವಿಭಾಜ್ಯ ಅಂಗ ಆಗಬೇಕು. ಇದು ಕೃಷಿ-ತೋಟಗಾರಿಕೆಯ ಉಪಕಸುಬು ಮಾತ್ರವಲ್ಲ, ಬೆಳೆಗಳ ಇಳುವರಿ ಹೆಚ್ಚಳಕ್ಕೂ ನೆರವಾಗುತ್ತದೆ. ಜೇನು ಹುಳದ ಪರಾಗ ಸ್ಪರ್ಶದಿಂದ ಕಾಫಿ ಬೆಳೆಯಲ್ಲಿ ಕಾಫಿ ಹೂಗಳಲ್ಲಿ ಇಳುವರಿ ಅಧಿಕ ಪಡೆಯಲು ಸಾಧ್ಯವಾಗಿದೆ. ಆಸಕ್ತ ರೈತರಿಗೆ ಮತ್ತು ಯುವ ರೈತರು ಕೃಷಿಯಲ್ಲಿ ತೊಡಗಿಕೊಳ್ಳಲು ಜೇನು ಸಾಕಾಣಿಕೆಯು ಒಂದು ಉತ್ತಮ ಆಯ್ಕೆಯಾಗಿದೆ.

ಕೊಡಗಿನ ಜೇನು:

ಕೊಡಗಿನ ಜೇನು ತುಪ್ಪಕ್ಕೆ ಯಾವದೇ ಬ್ರಾಂಡ್ ಹೆಸರು ಅವಶ್ಯಕತೆ ಬರುವದಿಲ್ಲ. ಇಲ್ಲಿನ ಜೇನು ತುಪ್ಪ ಅದರದೇ ಆದ ಮಹತ್ವ ಹೊಂದಿದೆ. ಹೊರಗಿನ ಜೇನು ತುಪ್ಪಗಳನ್ನು ಖರೀದಿಸಿ ತಂದು ಇಲ್ಲಿನ ಜೇನು ತುಪ್ಪದ ಮಹತ್ವವನ್ನು ಹಾಳು ಮಾಡುತ್ತಿರುವದನ್ನು ತಡೆಯಬೇಕಿದೆ.

ಜೇನು ಕೃಷಿಯಲ್ಲಿ ತೊಡಗಿಸಿಕೊಳ್ಳಲು ತೋಟಗಾರಿಕಾ ಇಲಾಖೆಯಲ್ಲಿ ಹಲವಾರು ಯೋಜನೆಗಳಿವೆ. ಜೇನು ನೊಣವು ಕೃಷಿ ಚಟುವಟಿಕೆಯ ಒಟ್ಟು ಶೇ. 30 ಇಳುವರಿಯನ್ನು ಹೆಚ್ಚಿಸುತ್ತವೆ. ಜೇನು ನೊಣದ ಸಂಖ್ಯೆ ಕಡಿಮೆಯಾದರೆ ತರಕಾರಿ, ಹಣ್ಣು ಇಂತಹ ಬೆಳೆಗಳ ಇಳುವರಿ ಕಡಿಮೆಯಾಗುತ್ತದೆ. ಆದರಿಂದ ಜೇನು ನೊಣದ ಸಂರಕ್ಷಣೆ ಮಾಡುವದು ಉತ್ತಮ ಮಾರ್ಗವಾಗಿದೆ.

ಎಷ್ಟೇ ಪ್ರಯತ್ನ ಪಟ್ಟುರು ಜೇನಿನ ಹುಳುಗಳಷ್ಟು ಚುರುಕು ತನದಿಂದ ಕೂಡಿರಲು ಮನುಷ್ಯನಿಂದ ಸಾಧ್ಯವೇ ಇಲ್ಲ. ಜೀವ ಸಂಕುಲಗಳ ಪೈಕಿ ಜೇನು ಅತ್ಯಂತ ಹೆಚ್ಚು ಚುರುಕುತನ ಹಾಗೂ ಕ್ರಿಯಾಶೀಲ ಜೀವಿ. ಅಷ್ಟೇ ಅಲ್ಲ ತನ್ನ ಕ್ರಿಯಾತ್ಮಕ ಕೆಲಸದ ಮೂಲಕ ಮನುಷ್ಯನ ಬದುಕಿನ ಅತಿ ಮುಖ್ಯ ವಸ್ತುಗಳಲ್ಲಿ ಒಂದಾದ ಜೇನನ್ನೂ ಸಹ ಅದು ಪೂರೈಸುತ್ತದೆ. ಈ ನಿಟ್ಟಿನಲ್ಲಿ ಜೇನುನೊಣಗಳನ್ನು ರಕ್ಷಿಸುವ ಕೆಲಸವನ್ನು ಎಲ್ಲರೂ ಮಾಡಬೇಕಾಗಿದೆ. ಅದಕ್ಕೇನು ದೊಡ್ಡ ತ್ಯಾಗ ಮಾಡಬೇಕಾಗಿಲ್ಲ. ನಾವಿದ್ದ ಪರಿಸರ ಚೆನ್ನಾಗಿಟ್ಟರೆ ಅಷ್ಟೇ ಸಾಕು. ಆದಷ್ಟು ಸಾವಯವ ಕೃಷಿ ಪದ್ಧತಿ ಅನುಸರಿಸುವುದು, ಮರಗಿಡಗಳನ್ನು ಬೆಳೆಸಬೇಕಷ್ಟೇ. ನೆನಪಿರಲಿ… ಜೇನುನೊಣವಿದ್ದರೆ ನಾವಿರುತ್ತೇವೆ.

ಜೇನುನೊಣಗಳು ಅನ್ನದಾತರ ಮಿತ್ರ. ಬೆಳೆ ಬೆಳೆಯು ವಾಗಲೂ ಈ ನೊಣಗಳ ಪಾತ್ರ ಬಲು ಮಹತ್ವವಾದುದು. ಇದು ಹಲವರಿಗೆ ಆದಾಯದ ಮೂಲವೂ ಹೌದು. ಬದುಕಿನುದ್ದಕ್ಕೂ ಬೇರೆಯವರಿಗೇ ಸಿಹಿ ಕೊಡಲು ಕಷ್ಟಪಡುವ ಈ ಪುಟ್ಟ ಜೀವಗಳು ಈಗ ಕಹಿ ನುಂಗುತ್ತಿವೆ. ಬದುಕನ್ನೇ ಕಳೆದುಕೊಳ್ಳುತ್ತಿವೆ. ಕೊಡಗಿನ ಕೃಷಿಕರಾದ ನಾವು ಜೇನು ಕೃಷಿಯಲ್ಲಿ ತೊಡಗಿಸಿಕೊಂಡು, ಜೇನುನೊಣವನ್ನು ಉಳಿಸಿ ಮನುಕುಲದ ಸುಮಧುರ ಬದುಕಿಗೆ ನಾಂದಿ ಹಾಡೋಣ. ಜೇನುನೊಣಗಳ ಉಳಿವಿಗೆ ಎಲ್ಲರೂ ಕಟಿಬದ್ಧರಾಗೋಣ.

ಲೇಖಕರು: ✍. ಅರುಣ್ ಕೂರ್ಗ್

 

ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.

About ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments