Reading Time: 2 minutes
ನಮ್ಮ ವಾಟ್ಸಾಪ್ ಕಮ್ಯುನಿಟಿ ಲಿಂಕ್ https://chat.whatsapp.com/Ln5WiyAJxApLbTxD0ttgcU ಜೋಯ್ನ್ ಆಗಿ.
ನಮ್ಮ ವಾಟ್ಸಾಪ್ ಚಾನಲ್ ಲಿಂಕ್ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.
ಕಡಂಗ: ಎಸ್.ವೈ.ಎಸ್. ಹಾಗೂ ಎಸ್.ಕೆ.ಎಸ್.ಎಸ್.ಎ. ಕಡಂಗ ಶಾಖೆ ವತಿಯಿಂದ 5 ಬಡ ಹೆಣ್ಣುಮಕ್ಕಳ ಸಾಮೂಹಿಕ ವಿವಾಹ ಹಾಗೂ ನೂರೇ ಅಜ್ಮಿರ್ ಕಾರ್ಯಕ್ರಮ ಕಡ0ಗ ಕೊಕ್ಕ0ಡ ಬಾಣೆ ದರ್ಗಾ ಸಮೀಪದಲ್ಲಿ ಜನವರಿ 13 ರಂದು ನಡೆಸಲಾಗುವುದು ಎಂದು ಎಸ್.ಕೆ.ಎಸ್.ಎಸ್.ಎಫ್. ಅಧ್ಯಕ್ಷ ಇಸಾಕ್ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಸ್ತ ಸದಸ್ಯ ಎಂ.ಎಂ. ಅಬ್ದುಲ್ಲಾ ಫೈಝಿ ರವರು ನಿರ್ವಹಿಸಲಿದ್ದಾರೆ ಕಾರ್ಯಕ್ರಮದ ದುಆ ಮಜಲಿಸ್ಗೆ ಜೈನುಲ್ ಅಬೀದಿನ್ ತಂಗಳ್ ಬೆಳ್ತಂಗಡಿ ರವರು ನೆರವೇರಿಸಲಿದ್ದಾರೆ.
ಕಾರ್ಯಕ್ರಮದ ಮುಖ್ಯ ಮುಖ್ಯ ಪ್ರವಚನ ನೂರೇ ಅಜ್ಮೀರ್ ಕಾರ್ಯಕ್ರಮವನ್ನು ವಲಿಯುದ್ದೀನ್ ಫೈಸಿ ಉಸ್ತಾದ್ ರವರು ನೇತೃತ್ವ ನೀಡಲಿದ್ದಾರೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಜಮಹತ್ ಅಧ್ಯಕ್ಷ ಅಬ್ದುಲ್ಲಾ , ಸುಬೀರ್, ರಜಾಕ್, ಯೂಸಫ್ ಮುಸ್ಲಿಯರ್, ಇಕ್ಬಾಲ್ ಹಾರಿಸ್ ಅಬ್ದುಲ್ ರಹಮಾನ್, ಅಬ್ದುಲ್ಲಾ ಹಾಜಿ, ರಹ್ಮಾನ್, ಸುಬಿರ್, ಹ್ಯಾರಿಸ್ ಹಾಜಿ, ಹ್ಯಾರಿಸ್ ಉಪಸ್ಥಿತರಿದ್ದರು.