ಆಯುರ್ವೇದ ವೈದ್ಯರಿಗೆ ನೀಮಾ ಕೊಡಗು ವತಿಯಿಂದ ಶಿಕ್ಷಣ ಕಾಯಾ೯ಗಾರ

Reading Time: 2 minutes

ಮಡಿಕೇರಿ: ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್‌ ಅಸೋಸಿಯೇಷನ್ (ಎನ್.ಐ.ಎಂ.ಎ), ಕೊಡಗು ಸಂಘದ ವತಿಯಿಂದ ಆಯುರ್ವೇದ ವೈದ್ಯರಿಗೆ ನಿರಂತರ ಶಿಕ್ಷಣವನ್ನು ಮಡಿಕೇರಿಯಲ್ಲಿ ಆಯೋಜಿಸಲಾಗಿತ್ತು.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/Ln5WiyAJxApLbTxD0ttgcU ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಜೆಡ್ಡು ಆಯುರ್ವೇದ ಆಸ್ಪತ್ರೆ ಮತ್ತು ಜೆಡ್ಡು ಫಾರ್ಮಸಿ ಸ್ಥಾಪಕರಾದ ಡಾ.ಗಣಪತಿ ಭಟ್ ಜೆಡ್ಡು, ಮಾತನಾಡಿ “ಆರೋಗ್ಯ ಕಾಪಾಡಲು ಆಯುರ್ವೇದ ಇಂದಿನ ಅಗತ್ಯವಾಗಿದೆ ,ವೃದ್ಯಾಪ್ಯದಲ್ಲಿ ಯೌವನ ಕಾಪಾಡುವಲ್ಲಿ ಆಯುರ್ವೇದದ ಮಹತ್ವ” ಎಂಬ ಬಗ್ಗೆ ಮಾಹಿತಿ ನೀಡಿದರು.

ಸಮಯಕ್ಕೆ ಸರಿಯಾದ ಭೋಜನ, ನಮ್ಮ ಜೀವನಶೈಲಿ, ಮಾನಸಿಕ ಸುಸ್ಥಿತಿ, ಹೀಗೆ ಯಾವ ಬದಲಾವಣೆ ಹೇಗೆ ನಮ್ಮ ದೀಘಾ೯ಯಷ್ಯವನ್ನು ಆರೋಗ್ಯಕರವಾಗಿ ಉತ್ಸಾಹಭರಿತವಾಗಿ ಕಾಪಾಡುವಲ್ಲಿ ಆಯುರ್ವೇದ ನೆರವಾಗುತ್ತದೆ ಎಂದು ಅವರು ಮಾಹಿತಿ ನೀಡಿದರು. ವಿರಾಮವಿಲ್ಲದೆ, ನಿಯತ ಗುರಿ ಇಲ್ಲದೆ ಓಡುತ್ತಿರುವ ಈ ಸಮಾಜ ವಿಶ್ರಮಿಸುವಷ್ಟರಲ್ಲಿ ವಾರ್ಧಕ್ಯ ಮತ್ತು ಅನಾರೋಗ್ಯ ಮಾನವನನ್ನು ಸಂಪೂರ್ಣ ದುರ್ಬಲನನ್ನಾಗಿಸುತ್ತದೆ. ಆದ್ದರಿಂದ ಸರಿಯಾದ ಸಮಯದಲ್ಲಿ ಶಾರೀರಿಕ, ಮಾನಸಿಕ, ಆಧ್ಯಾತ್ಮಿಕ ಉಪಚಾರಗಳನ್ನು ಕೂಡ ಮಾಡುವುದರ ಮೂಲಕ ಆರೋಗ್ಯಕರ ವಾರ್ಧಕ್ಯವನ್ನು ಕಳೆಯುವ ಬಗ್ಗೆ ಡಾ. ಗಣಪತಿ ಭಟ್ ಎಚ್ಚರಿಕೆಯ ಸಲಹೆ ನೀಡಿದರು.

ಎನ್.ಐ.ಎಂ.ಎ ಕೊಡಗು, ಘಟಕದ ಅಧ್ಯಕ್ಷ ಡಾ.ರಾಜಾರಾಮ್ ಕಾರ್ಯದರ್ಶಿ ಡಾ. ಶ್ಯಾಮಪ್ರಸಾದ ಪಿ.ಎಸ್, ಖಜಾಂಜಿ ಡಾ.ಪದ್ಮನಾಭ, ಮಹಿಳಾ ಘಟಕದ ಅಧ್ಯಕ್ಷೆ ಡಾ.ಶೈಲಜಾ ರಾಜೇಂದ್ರ, ಉಪಸ್ಥಿತರಿದ್ದರು ಖಜಾಂಚಿ ಡಾ.ಹೀನ ಸ್ವಾಗತಿಸಿ, ಡಾ.ಈಶ್ವರಿ ಸಂಪನ್ಮೂಲ ವ್ಯಕ್ತಿಯ ಪರಿಚಯ ಮಾಡಿದ ಕಾಯ೯ಕ್ರಮದಲ್ಲಿ ಡಾ.ರೋಷನ್ ವಂದಿಸಿ, ಡಾ.ಅನುಷಾ ನಿರೂಪಿಸಿದರು. . ಎನ್.ಐ.ಎಂ.ಎ ಕೊಡಗು ಘಟಕದ , ಹಿರಿಯ ವೈದ್ಯರುಗಳಾದ ಡಾ.ಉದಯಶಂಕರ್, ಡಾ.ಉದಯಕುಮಾರ್, ಡಾ.ಸಾವಿತ್ರಿ, ಡಾ. ರಾಜೇಂದ್ರ, ಮತ್ತಿತರರೂ ಸೇರಿದಂತೆ ಜಿಲ್ಲೆಯಾದ್ಯಂತಲಿನ 30 ಆಯುವೇ೯ದ ವೈದ್ಯರು ಕಾಯಾ೯ಗಾರದಲ್ಲಿ ಪಾಲ್ಗೊಂಡಿದ್ದರು.

ಹಂಚಿಕೊಳ್ಳಿ
0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments
error: Content is protected !!
0
Would love your thoughts, please comment.x
()
x