“ವೈದ್ಯೊ ನಾರಾಯಣೋ ಹರಿ” ಜುಲೈ-1, ರಾಷ್ಟ್ರೀಯ ವೈದ್ಯರ ದಿನ ವಿಶೇಷ ಲೇಖನ

“ವೈದ್ಯೊ ನಾರಾಯಣೋ ಹರಿ” ರಾಷ್ಟ್ರೀಯ ವೈದ್ಯರ ದಿನ ವಿಶೇಷ:

ಜುಲೈ 1ರಂದು ರಾಷ್ಟ್ರೀಯ ವೈದ್ಯರ ದಿನವಾಗಿ ಭಾರತದಾದ್ಯಂತ ಆಚರಿಸಲಾಗುತ್ತದೆ. 1991ರಲ್ಲಿ ಭಾರತ ಸರಕಾರವು ಪ್ರಸಿದ್ಧ ವೈದ್ಯ ‘ಭಾರತರತ್ನ’ ಡಾ. ಬಿಧಾನ್ ಚಂದ್ರ ರಾಯ್ (ಡಾ. ಬಿ.ಸಿ.ರಾಯ್) ರವರ ಜನ್ಮ ದಿನ ಮತ್ತು ಸ್ಮ್ರತಿದಿನದ (ಜನನ: ಜುಲೈ 01-1882 ಮರಣ ಜುಲೈ 01-1962) ಗೌರವ ಮತ್ತು ಗೌರವಾರ್ಪಣೆ ಮಾಡಲು ರಾಷ್ಟ್ರೀಯ ವೈದ್ಯರ ದಿನವನ್ನಾಗಿ ಆಚರಿಸಲಾಗುತ್ತದೆ.
ವೈದ್ಯರ ಪಾತ್ರಗಳು, ಪ್ರಾಮುಖ್ಯತೆಗಳು, ಜವಾಬ್ದಾರಿಗಳನ್ನು ಅರಿತುಕೊಳ್ಳಲು ವೈದ್ಯಕೀಯ ವೃತ್ತಿಯನ್ನು ಗೌರವಿಸುವ ಸಲುವಾಗಿ ವೈದ್ಯರ ದಿನವನ್ನು ಆಚರಿಸಿ ಅವರ ವೃತ್ತಿ ಧರ್ಮವನ್ನು ಗೌರವಿಸಲ್ಪಡುವುದು ವಿಶೇಷವಾಗಿದೆ.
ಪ್ರತಿಯೊಬ್ಬರ ಜೀವನದಲ್ಲಿ ವೈದ್ಯರ ಪಾತ್ರ, ಮಹತ್ವ ಮತ್ತು ಅತ್ಯವಶ್ಯಕತೆಯ ಅರಿವು ಮೂಡಿಸುವುದು ಈ ಜಾಗೃತಿ ಪ್ರಚಾರದ ವಾರ್ಷಿಕ ಆಚರಣೆಯು ಮುಖ್ಯ ಉದ್ದೇಶವಾಗಿದೆ.. ವೈದ್ಯರ ದಿನಾಚರಣೆಯಿಂದ ಅವರ ವೃತಿ ಜೀವನದ ಬದ್ಧತೆಯನ್ನು ಗಟ್ಟಿಗೊಳಿಸಲು ಸಹಾಯ ಮಾಡುತ್ತದೆ. ಭಾರತದಲ್ಲಿ ಅತೀ ಹೆಚ್ಚಿನ ಜನತೆಯು ವೈದ್ಯರ ಮತ್ತು ಅವರ ಗುಣಮಟ್ಟದ ಚಿಕಿತ್ಸೆಯ ಮೇಲೆ ಅವಲಂಬಿತರಾಗಿದ್ದು, ಇಂತಹ ಆಚರಣೆಯಿಂದ ರೋಗಿಗಳಿಗೆ ಗುಣ ಮಟ್ಟದ ಚಿಕಿತ್ಸೆಗಳು, ಮತ್ತದರ ಲಭ್ಯತೆಗಳ ಬಗ್ಗೆ ಸಂಪೂರ್ಣ ಮಾಹಿತಿ ದೊರೆದಂತಾಗುತ್ತದೆ.

ರಾಷ್ಟ್ರೀಯ ವೈದ್ಯರ ದಿನದ ಸಮಾರಂಭದ ವಿಶೇಷತೆ:
* ರಾಷ್ಟ್ರೀಯ ವೈದ್ಯರ ದಿನಾಚರಣೆಯನ್ನು ಸರಕಾರಗಳು ಮತ್ತು ಸರಕಾರೇತರ ಆರೋಗ್ಯ ಸಂಸ್ಥೆಗಳಿಂದ ಆಚರಿಸಲಾಗುತ್ತದೆ.
* ವಿವಿಧ ರೀತಿಯ ಆರೋಗ್ಯ ಶಿಭಿರಗಳು ರಕ್ತದಾನ ಮತ್ತು ಆರೋಗ್ಯ ಚಟುವಟಿಕೆಗಳನ್ನು ನಡೆಸಲಾಗುತ್ತದೆ.
* ಆರೋಗ್ಯದ ಪರಿಶೀಲನೆ, ಚಿಕಿತ್ಸೆ, ರೋಗಗಳ ತಡೆಗಟುವಿಕೆ, ರೋಗ ನಿರ್ಣಯ, ಮುಂತಾದದವುಗಳ ಕುರಿತು ಚರ್ಚೆಗಳನ್ನು ಆಯೋಜಿಸಲಾಗುತ್ತದೆ.
* ಉತ್ತಮ ಮತ್ತು ಆರೋಗ್ಯಕರ ಸಾಮಾಜಿಕ ಅಭಿವೃದ್ಧಿಗಾಗಿ ವೈದ್ಯರ ಮೂಲಕ ರೋಗಿಗಳಿಗೆ ವೈದ್ಯಕೀಯ ಸೇವೆಗಳನ್ನು ಉತ್ತೇಜಿಸಲು ಕಾರ್ಯಕ್ರಮ ರೂಪಿಸಲಾಗುತ್ತದೆ.
* ಸಾಮಾನ್ಯ ವೈದ್ಯಕೀಯ ವೆಚ್ಚಗಳು ಇಲ್ಲದೆ ಆರೋಗ್ಯ ಸೇವೆಗಳನ್ನು ತಿಳಿಸಲು ಸಾರ್ವಜನಿಕ ಸ್ಥಳಗಳಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರಗಳನ್ನು ಆಯೋಜಿಸಲಾಗುತ್ತದೆ.
* ಆರೋಗ್ಯ ಸ್ಥಿತಿ, ಆರೋಗ್ಯ ಸಲಹೆ, ಮಹಿಳೆಯರ ಮತ್ತು ಮಕ್ಕಳಿಗೆ ಪೋಶಕಾಂಶಯುಕ್ತ ಆಹಾರದ ಬಗ್ಗೆ ಮಾಹಿತಿಗಳ ಜೊತೆಗೆ ಶುಚಿತ್ವದ ಬಗ್ಗೆ ಮಾಹಿತಿ ನೀಡಲಾಗುತ್ತದೆ.
* ವೈದ್ಯಕೀಯ ವೃತಿಯ ಬಗ್ಗೆ ವಿದ್ಯಾರ್ಥಿಗಳಿಗೆ ಆಶಕ್ತಿ ಮೂಡಿಸಲು ಶಾಲಾ-ಕಾಲೇಜುಗಳಲ್ಲಿ ಸೇವೆಗಳ ಬಗ್ಗೆ ಮಾಹಿತಿಗಳನ್ನು ನೀಡುವುದು, ಮತ್ತು ಇದಕ್ಕೆ ಸಂಭಂದಿಸಿದ ರಸಪ್ರಶ್ನೆ, ಕ್ರೀಯಾ ಚಟುವಟಿಕೆಗಳು, ಸೃಜನಾತ್ಮಕ ಜ್ಞಾನಕ್ಕಾಗಿ ವೈಜ್ಞಾನಿಕ ಸಾಧನ ಸಲಕರಣೆಗಳನ್ನು ಒದಗಿಸಿಕೊಡುವುದು ಇತ್ಯಾದಿಯಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
* ಜುಲೈ 1ರಂದು ಸಮಾಜದ ನಾಗರಿಕರು, ಕುಟುಂಬಸ್ಥರು, ಸ್ನೇಹಿತರನ್ನೊಳಗೊಂಡಂತೆ ಎಲ್ಲರು ಶುಭಾಶಯ ಪತ್ರಗಳು, ಈ ಕಾರ್ಡ್‍ಗಳು, ಮೆಚ್ಚುಗೆ ಕಾರ್ಡ್, ಸಾಮಾಜಿಕ ಜಾಲತಾಣಗಳಲ್ಲಿಯೂ ಅವರಿಗೊಂದು ಶುಭಾಶಯಗಳನ್ನು ಕಳುಹಿಸಿ ಕರ್ತವ್ಯನಿರತ ಜವಾಬ್ದಾರಿಯುತ ವೈದ್ಯರುಗಳಿಗೆ ಶುಭ ಹಾರೈಸೋಣ. ಮತ್ತವರ ಜವಾಬ್ದಾರಿಯುತ ಕರ್ತವ್ಯಕ್ಕೆ ಹಾಗೂ ಕುಟುಂಬಕ್ಕೆ ಬೆಂಬಲವಾಗಿ ನಿಂತು ಸಹಕರಿಸೋಣ.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

. ಕಾನತ್ತಿಲ್ ರಾಣಿ ಅರುಣ್

✍. ಕಾನತ್ತಿಲ್ ರಾಣಿ ಅರುಣ್

ಕಾನತ್ತಿಲ್‌ ರಾಣಿ ಅರುಣ್‌

0 0 votes
Article Rating
Subscribe
Notify of
guest
0 Comments
Inline Feedbacks
View all comments