ಮಡಿಕೇರಿ ದಸರಾ 2024 Madikeri Dasara 2024

Reading Time: 20 minutes

ಪ್ರಾಸ್ತವಿಕ

1790 ರಲ್ಲಿ ಪ್ರಾರಂಭಗೊಂಡ ಮಡಿಕೇರಿ ದಸರಾ ಮಹೋತ್ಸವಕ್ಕೆ 234ನೇ ವರ್ಷದ ಸಂಭ್ರಮ

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ವಿಶ್ವ ವಿಖ್ಯಾತ ಮೈಸೂರು ದಸರಾ ನಾಡಹಬ್ಬದ ನಂತರ ಐತಿಹಾಸಿಕ ಮಡಿಕೇರಿ ದಸರಾ ನಾಡಹಬ್ಬವು ತನ್ನದೇ ಆದ ಮಹತ್ವವನ್ನು ಪಡೆದಿದೆ. ಮಡಿಕೇರಿ ದಸರಾ ವರ್ಷದಿಂದ ವರ್ಷಕ್ಕೆ ತನ್ನ ಆಕರ್ಷಣೆಯನ್ನು ವೃದ್ಧಿಸಿಕೊಂಡೇ ಬರುತ್ತಿದೆ. ಮಡಿಕೇರಿ ದಸರಾ ನಾಡಹಬ್ಬವನ್ನು ಕೊಡಗು ಜಿಲ್ಲೆಯಿಂದಲು, ಇತರ ಜಿಲ್ಲೆಗಳಿಂದಲೂ ಇತರ ರಾಜ್ಯಗಳಿಂದ ಮಾತ್ರವಲ್ಲದೆ, ದೇಶ ವಿದೇಶಗಳಿಂದ ಲಕ್ಷಾಂತರ ಜನರು ವೀಕ್ಷಿಸಲು ಬರುತ್ತಿದ್ದಾರೆ. ಮಹಾಲಯ ಅಮವಾಸೆಯ ಮಾರನೆಯ ದಿನದಿಂದ ನಗರದ ನಾಲ್ಕು ಶಕ್ತಿ ದೇವತೆಗಳ ಕರಗವನ್ನು ಸಿಂಗರಿಸಿ ಮೆರವಣಿಗೆಯ ಮೂಲಕ ಐತಿಹಾಸಿಕ ಮಡಿಕೇರಿ ದಸರಾ ಹಬ್ಬಕ್ಕೆ ಚಾಲನೆ ದೊರೆಯಲ್ಪಡುತ್ತದೆ. ಒಂಬತ್ತು ದಿನಗಳ ನವರಾತ್ರಿ ಉತ್ಸವದೊಂದಿಗೆ ಹತ್ತನೇ ದಿನದ ವಿಜಯದಶಮಿಯಂದು ನಗರದ ದಶದೇಗುಲಗಳ ದಶಮಂಟಪಗಳೊಂದಿಗೆ, ನಾಲ್ಕು ಶಕ್ತಿ ದೇವತೆಗಳ ಕರಗಗಳ ಶೋಭಾಯಾತ್ರೆಯು ನಡೆಯಲ್ಪಡುತ್ತದೆ. 

ವಿಜಯದಶಮಿಯಂದು ರಾತ್ರಿ 10ಗಂಟೆಗೆ ಪ್ರಾರಂಭವಾಗುವ ಶೋಭಾಯಾತ್ರೆಯು ಮಾರನೆಯ ದಿನ ಸಂಜೆಯ ವರೆಗೂ ನಡೆಯುತ್ತದೆ. ಈ ಶೋಭಾಯಾತ್ರೆಯು ಮೈಸೂರು ದಸರೆಯ ಶೋಭಾಯಾತ್ರೆಗಿಂತಲೂ ಭಿನ್ನವಾಗಿರುತ್ತದೆ. ಇದೇ ಮಡಿಕೇರಿ ದಸರಾ ಮಹೋತ್ಸವದ ವಿಶಿಷ್ಟ. ಮಡಿಕೇರಿ ದಸರಾ ನಾಡಹಬ್ಬದ ಬಗ್ಗೆ ವಿವರಗಳನ್ನು ನಿಮಗೆ ತಿಳಿಸುವ ಜೊತೆಯಲ್ಲೆ ಮಡಿಕೇರಿ ದಸರಾ ಪ್ರಾರಂಭವಾದ ಇತಿಹಾಸದ ಬಗ್ಗೆ ಹೇಳಬೇಕಾಗಿದೆ. ಇಲ್ಲಿಯವರೆಗೆ ಮಡಿಕೇರಿ ದಸರಾ ನಾಡಹಬ್ಬ ಪ್ರಾರಂಭವಾದ ಬಗ್ಗೆ ನಿಖರವಾದ ಮಾಹಿತಿ ಲಭ್ಯವಾಗಿಲ್ಲ, ಆದರೆ ಇದರ ಬಗ್ಗೆ ಒಂದು ಅಧ್ಯಯನ ನಡೆಸಿದಾಗ ಕೆಲವು ಮಹತ್ತರವಾದ ಅಂಶಗಳು ಮಡಿಕೇರಿ ದಸರಾ ಪ್ರಾರಂಭದ ಬಗ್ಗೆ ಇತಿಹಾಸದ ಪುಟಗಳಿಂದ ದೊರೆಯುತ್ತದೆ. ಈ ಕುರಿತು ಮಡಿಕೇರಿ ದಸರಾ ಪ್ರಾರಂಭವಾದ ಹಿನ್ನಲೆ, ಇತಿಹಾಸದ ಬಗ್ಗೆ, ಶಕ್ತಿ ದೇವತೆಗಳ ಕರಗಗಳ ಇತಿಹಾಸ, ದಶದೇಗುಲಗಳ, ದಶಮಂಟಪಗಳ ಬಗ್ಗೆ ವಿವರಗಳನ್ನು ಇಲ್ಲಿ ನಾವು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ.

ತಾ||03-10-2024ರಂದು ಸಂಜೆ 4 ಗಂಟೆಗೆ ಇತಿಹಾಸ ಪ್ರಸಿದ್ದ ಮಡಿಕೇರಿಯ ಗದ್ದುಗೆ ಬಳಿಯಿರುವ ಪಂಪಿನ ಕೆರೆಯ ಬಳಿ ನಗರದ ನಾಲ್ಕು ಶಕ್ತಿದೇವತೆಗಳ ಕರಗಗಳನ್ನು ಸಿಂಗರಿಸಿ ಮಡಿಕೇರಿ ನಗರದ ಮುಖ್ಯ ಬೀದಿಗಳಲ್ಲಿ ಸಂಚರಿಸುವ ಮೂಲಕ ಐತಿಹಾಸಿಕ ಮಡಿಕೇರಿ ದಸರಾ ನಾಡಹಬ್ಬಕ್ಕೆ ಚಾಲನೆ ದೊರೆಯಲಿದೆ.
ಅಲ್ಲಿಂದ 9 ದಿನಗಳ ನವರಾತ್ರಿ ಉತ್ಸವದೊಂದಿಗೆ, ತಾ|| 11-10-2024ರ ಆಯುಧಪೂಜಾ ಮಹೋತ್ಸವ ಹಾಗೂ ತಾ||12-10-2024ರ ರಾತ್ರಿ 10 ಗಂಟೆಯಿಂದ ನಾಲ್ಕು ಶಕ್ತಿದೇವತೆಗಳ ಕರಗ ಗಳೊಂದಿಗೆ ದಶದೇಗುಲಗಳ ದಶಮಂಟಪಗಳ ಭವ್ಯ ಶೋಭಾಯಾತ್ರೆಯು ಮಡಿಕೇರಿ ನಗರದಲ್ಲಿ ವಿಜೃಂಭಣೆಯಿಂದ ನಡೆಯಲಿದೆ. ತಾ||. 13-10-2024 ರಂದು ಬನ್ನಿ ಮಂಟಪದಲ್ಲಿ ಬನ್ನಿ ಕಡೆಯುವ ಮೂಲಕ ಐತಿಹಾಸಿಕ ಮಡಿಕೇರಿ ದಸರಾ ನಾಡ ಹಬ್ಬಕ್ಕೆ ತೆರೆ ಬೀಳಲಿದೆ.

2024ರ ಮಡಿಕೇರಿ ದಸರಾ ಜನೋತ್ಸವ ಮಂಟಪಗಳ ತೀರ್ಪು ನೀಡುವ ನಿಗದಿತ ಸಮಯ ಮತ್ತು ಸ್ಥಳಗಳು

1. ಶ್ರೀ ಪೇಟೆ ಶ್ರೀ ರಾಮ ಮಂದಿರ, ತೀರ್ಪಿನ ಸಮಯ. 10.00 P.M. ಸ್ಥಳ: ಕಾಫಿ ಕೃಪ ಕಟ್ಟಡದ ಬಳಿ, ಗಾಂಧಿ ಮೈದಾನ

2. ಶ್ರೀ ದೇಚೂರು ಶ್ರೀ ರಾಮ ಮಂದಿರ, ತೀರ್ಪಿನ ಸಮಯ: 11.00 P.M. ಸ್ಥಳ: ನಗರಸಭೆ ಹತ್ತಿರದ ಕೆ.ಇ.ಬಿ. ರಸ್ತೆ ಮುಂಭಾಗ

3. ಶ್ರೀ ದಂಡಿನ ಮಾರಿಯಮ್ಮ, ತೀರ್ಪಿನ ಸಮಯ: 2.50 A.M. ಸ್ಥಳ: ಕೊಡವ ಸಮಾಜ ಮುಂಭಾಗ

4. ಶ್ರೀ ಚೌಡೇಶ್ವರಿ, ತೀರ್ಪಿನ ಸಮಯ: 11.40 P.M. ಸ್ಥಳ: ಹೋಟೆಲ್‌ ಪಾಪ್ಯುಲರ್‌ ಮುಂಭಾಗ 

5. ಶ್ರೀ ಕಂಚಿ ಕಾಮಾಕ್ಷಿ, ತೀರ್ಪಿನ ಸಮಯ: 3.25 A.M. ಸ್ಥಳ: ವಿನೋದ್‌ ಮೆಡಿಕಲ್ಸ್ ಮುಂಭಾಗ‌

6. ಶ್ರೀ ಚೌಟಿ ಮಾರಿಯಮ್ಮ, ತೀರ್ಪಿನ ಸಮಯ: 4.00 A.M. ಸ್ಥಳ: ಕಾವೇರಿ ಕಲಾಕ್ಷೇತ್ರ ಮುಂಭಾಗ

7. ಶ್ರೀ ಕೋದಂಡ ರಾಮ, ತೀರ್ಪಿನ ಸಮಯ: 01.00 A.M. ಸ್ಥಳ: ಮೆಟ್ರೋ ಫ್ರೆಷ್ ಮುಂಭಾಗ

8. ಶ್ರೀ ಕೋಟೆ ಮಾರಿಯಮ್ಮ, ತೀರ್ಪಿನ ಸಮಯ: 01.35 A.M. ಸ್ಥಳ: ಕೆ.ಎಸ್.ಆರ್.ಟಿ.ಸಿ. ಬಸ್‌ ಸ್ಟ್ಯಾಂಡ್ ಮುಂಭಾಗ‌

9. ಶ್ರೀ ಕೋಟೆ ಗಣಪತಿ, ತೀರ್ಪಿನ ಸಮಯ: 12.20 A.M. ಸ್ಥಳ: ನಗರ ಪೋಲಿಸ್‌ ಠಾಣೆ ಮುಂಭಾಗ

10. ಶ್ರೀ ಕರವಲೆ ಭಗವತಿ, ತೀರ್ಪಿನ ಸಮಯ: 2.10 A.M. ಸ್ಥಳ: ಸಿಂದೂರು ಬಟ್ಟೆ ಮಳಿಗೆ ಮುಂಭಾಗ

1.‌ ಶ್ರೀ ಪೇಟೆ ರಾಮಮಂದಿರ
159
ನೇ ವರ್ಷಾಚರಣೆ
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

2. ದೇಚೂರು ಶ್ರೀರಾಮ ಮಂದಿರ
ದೇಚೂರು ಶ್ರೀರಾಮ ಮಂದಿರದ ದಸರಾ ಸಮಿತಿ
106ನೇ ವರ್ಷಾಚರಣೆ
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

3. ಶ್ರೀ ದಂಡಿನ ಮಾರಿಯಮ್ಮ ದೇವಾಲಯ
ದಂಡಿನ ಮಾರಿಯಮ್ಮ ದಸರಾ ಸಮಿತಿ

94
ನೇ ವರ್ಷಾಚರಣೆ
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

4. ಶ್ರೀ ಚೌಡೇಶ್ವರಿ ದೇವಾಲಯ
ಶ್ರೀ ಚೌಡೇಶ್ವರಿ ಬಾಲಕ ಭಕ್ತ ಮಂಡಳಿ ದಸರಾ ಸಮಿತಿ

62
ನೇ ವರ್ಷಾಚರಣೆ
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

5. ಶ್ರೀ ಕಂಚಿ ಕಾಮಾಕ್ಷಿ ದೇವಾಲಯ
ಕಂಚಿ ಕಾಮಾಕ್ಷಿ ಬಾಲಕ ಮಂಡಳಿ ದಸರಾ ಸಮಿತಿ

61
ನೇ ವರ್ಷಾಚರಣೆ
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

6. ಕುಂದುರು ಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯ
ಕುಂದುರುಮೊಟ್ಟೆ ಶ್ರೀ ಚೌಟಿಮಾರಿಯಮ್ಮ ದೇವಸ್ಥಾನ ದಸರಾ ಉತ್ಸವ ಸಮಿತಿ

51
ನೇ  ವರ್ಷಾಚರಣೆ
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

7. ಶ್ರೀ ಕೊದಂಡ ರಾಮ ದೇವಾಲಯ
ಶ್ರೀ ಕೊದಂಡ ರಾಮ ದೇವಾಲಯ ದಸರಾ ಸಮಿತಿ

50
ನೇ ವರ್ಷಾಚರಣೆ
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

8. ಶ್ರೀ ಕೋಟೆ ಮಾರಿಯಮ್ಮ ದೇವಾಲಯ
ಕೋಟೆಮಾರಿಯಮ್ಮ ಯುವಕ ಮಿತ್ರ ಮಂಡಳಿ

49
ನೇ ವರ್ಷಾಚರಣೆ
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

9. ಶ್ರೀ ಕೋಟೆ ಮಹಾ ಗಣಪತಿ ದೇವಾಲಯ
ಶ್ರೀ ಕೋಟೆ ಮಹಾ ಗಣಪತಿ ದಸರಾ ಮಂಟಪ ಸಮಿತಿ

48
ನೇ ವರ್ಷಾಚರಣೆ
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

10. ಶ್ರೀ ಕರವಲೆ ಮಹಿಷಿಮರ್ದಿನಿ ಭಗವತಿ ದೇವಸ್ಥಾನ
ಶ್ರೀ ಕರವಲೆ ಭಗವತಿ ದಸರಾ ಉತ್ಸವ ಸಮಿತಿ

30
ನೇ ವರ್ಷಾಚರಣೆ
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದಿನಾಂಕ: 03.10.2024 ಗುರುವಾರ ರಂದು 4 ಶಕ್ತಿ ದೇವತೆಗಳ ಕರಗ ಮೆರವಣಿಗೆ ಆರಂಭ.
ದಿನಾಂಕ: 04.10.2024 ಶುಕ್ರವಾರ ರಂದು ಸಾಂಸ್ಕೖತಿಕ ಕಾಯ೯ಕ್ರಮಗಳ ಉದ್ಘಾಟನೆ – ಗಾಂಧಿ ಮೈದಾನದಲ್ಲಿ.

*ಮಡಿಕೇರಿಯ ಕಾವ್ಯಶ್ರೀ ಕಪಿಲ್ ಕಲಾಕಾವ್ಯ ತಂಡದಿಂದ ನೖತ್ಯ ವೈವಿಧ್ಯ, ಮೇವಡ ಕಾವೇರಿ ಅಯ್ಯಪ್ಪ ಮತ್ತು ತಂಡದಿಂದ ಗಾನಸುಧೆ.
*ಕೂಡಿಗೆಯ ಎ ಕ್ರಿಯೇಟೀವ್ ಡಾನ್ಸ್ ಅಕಾಡೆಮಿಯಿಂದ ಭಾರತೀಯ ಶಾಸ್ತ್ರೀಯ ನೖತ್ಯ.
*ಮೂನಾ೯ಡಿನ ಸ್ಟೆಪ್ ಅಪ್ ಶೇಡ ತಂಡದಿಂದ ನೖತ್ಯ ವೈಭವ ನಿಮಿಷ, ನಾಪೋಕ್ಲುವಿನ ರವಿ ಓಂಕಾರ್ ತಂಡದಿಂದ ಸಂಗೀತ ರಸಮಂಜರಿ.
*ವೀರಾಜಪೇಟೆಯ ನಾಟ್ಯಾಂಜಲಿ ತಂಡದಿಂದ ನೖತ್ಯ ವೈವಿಧ್ಯ.
*ಸಂಪಾಜೆಯ ಸವಿತಾಕಿರಣ್ ತಂಡದಿಂದ ನೖತ್ಯ ವೈವಿಧ್ಯ.

ದಿನಾಂಕ: 05.10.2024 ಶನಿವಾರ ರಂದು ಬೆಳಗ್ಗೆ 9 ಗಂಟೆಯಿಂದ ರೋಟರಿ ಮಿಸ್ಟಿ ಹಿಲ್ಸ್ ಸಹಯೋಗದಲ್ಲಿ ಮಕ್ಕಳ ಸಂತೆ, ಮಕ್ಕಳ ಅಂಗಡಿ, ಮಕ್ಕಳ ಮಂಟಪ, ಛದ್ನವೇಷ ಮತ್ತು ಕ್ಲೇಮಾಡೆಲಿಂಗ್ ಸ್ಪಧೆ೯ಗಳು, ಜತೆಗೆ ನಂಜನಗೂಡಿನ ಸುನಾದ್ ವಿನೋದಿನಿ ಸಂಗೀತ ಶಾಲಾ ತಂಡದಿಂದ ವಾದ್ಯ ಸಂಗೀತ.

ಸಂಜೆ 6 ಗಂಟೆಯಿಂದ ಮಕ್ಕಳಿಂದಲೇ ಸಾಂಸ್ಕೖತಿಕ ಕಾಯ೯ಕ್ರಮಗಳು:

*ಹುಬ್ಬಳ್ಳಿಯ ಭೂಮಿಕಾ ದೀಪಿಕಾ ಅವರಿಂದ ಗಾನಸಂಜೆ.
*ಮಡಿಕೇರಿಯ ವಿಕ್ರಂ ಜಾದೂಗಾರ್ ಅವರಿಂದ ಮ್ಯೂಜಿಕ್ ಶೋ.
*ಬನ್ನೂರಿನ ಚಿಲಿಪಿಲಿ ಗೊಂಬೆಗಳಿಂದ ಮಕ್ಕಳಿಗೆ ರಂಜನೆ.
*ಮಕ್ಕಳ ತಂಡಗಳಿಂದ ವೈವಿಧ್ಯಮಯ ಕಾಯ೯ಕ್ರಮಗಳು.

ದಿನಾಂಕ: 06.10.2024 ಭಾನುವಾರ ಕಾಫಿ ದಸರಾ – ಅಕ್ಟೋಬರ್ 6 ರಂದು ಭಾನುವಾರ ಬೆಳಗ್ಗೆ 10 ಗಂಟೆಗೆ ಪ್ರಥಮ ವಷ೯ದ ಕಾಫಿ ದಸರಾಕ್ಕೆ ಚಾಲನೆ . ಡಾ, ಮಂಥರ್ ಗೌಡ ಮಾಗ೯ದಶ೯ನದಲ್ಲಿ ಕನಾ೯ಟಕ ಬೆಳೆಗಾರರ ಸಂಘ, ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್, ಕಾಫಿ ಮಂಡಳಿ, ತೋಟಗಾರಿಕೆ, ಕೖಷಿ, ಪಶುವೈದ್ಯಕೀಯ, ಮೀನುಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಕಾಫಿ ದಸರಾ ಆಯೋಜನೆ, ಗಾಂಧಿ ಮೈದಾನದ ಗ್ಯಾಲರಿಯೊಳಗೆ 32 ಮಳಿಗೆಗಳಲ್ಲಿ ಕಾಫಿ, ಕೖಷಿ ತೋಟಗಾರಿಕೆ, ಹೈನುಗಾರಿಕೆ, ಮೀನುಗಾರಿಕೆ ಸಂಬಂಧಿತ ಮಾಹಿತಿ ಪ್ರದಶ೯ನ, ವೇದಿಕೆಯಲ್ಲಿ ಕಾಫಿ ಮತ್ತು ಕೖಷಿಗೆ ಸಂಬಂಧಿಸಿದಂತೆ ವಿಷಯ ತಜ್ಞರಿಂದ ವಿಚಾರಸಂಕಿರಣ.

ಸಂಜೆ 6 ಗಂಟೆಯಿಂದ ಸಾಂಸ್ಕೖತಿಕ ಕಾಯ೯ಕ್ರಮಗಳು:

*ಸರಿಗಮಪ ತಂಡದ ಜ್ಯುರಿ ಮಹೇಂದ್ರ ನೇತೖತ್ವದಲ್ಲಿ ಕಲಾವಿದರಾದ ದಿವ್ಯ ಹೆಗಡೆ.
*ರವಿಕುಮಾರ್, ಮೆಹಬೂಬ್ ಸಾಬ್, ಮಿಂಚು, ಪ್ರಗತಿ ಬಡಿಗೇರ್, ಪ್ರಥ್ವಿ ಕುಂದಾಪುರ,ತಂಡದಿಂದ ಗಾನ ಸಂಭ್ರಮ.
*ಮಂಗಳೂರು ಗಾನನೖತ್ಯ ಅಕಾಡೆಮಿಯ ಟೀನಾ ಚೇತನ್ ತಂಡದಿಂದ ನೖತ್ಯ ವೈವಿಧ್ಯ.
*ಬೆಂಗಳೂರಿನ ಟೀಂ ಪೊನಿ ದ್ವನಿ ತಂಡದಿಂದ ಕೊಡಗಿನ ಸಂಸ್ಕೖತಿ ನೖತ್ಯ.
*ನಟರಾಜ ನೖತ್ಯ ನಿಕೇತನ ಕಲ್ಲುಗುಂಡಿ ತಂಡದಿಂದ ನೖತ್ಯ ವೈವಿಧ್ಯ.

ದಿನಾಂಕ: 07.10.2024 ಸೋಮವಾರ ರಂದು ಅಕ್ಟೋಬರ್ 7 ರಂದು ಸೋಮವಾರ ಬೆಳಗ್ಗೆ 10 ಗಂಟೆಯಿಂದ ಕಾಫಿ ದಸರಾ ಪ್ರಯುಕ್ತ ಮಳಿಗೆಗಳು ತೆರೆದಿರುತ್ತವೆ, ವೇದಿಕೆಯಲ್ಲಿ ಕಾಫಿ, ಕೖಷಿ ಸಂಬಂಧಿತ ಮಹತ್ವದ ವಿಚಾರಸಂಕಿರಣ ಆಯೋಜಿತವಾಗಿದೆ.

ಸಂಜೆ 6 ಗಂಟೆಯಿಂದ ಸಾಂಸ್ಕೖತಿಕ ಕಾಯ೯ಕ್ರಮಗಳು:

*ಸೋನಿ ರಿಯಾಲಿಟಿ ಶೋ ಸೂಪರ್ ಸ್ಟಾರ್ ಸಿಂಗರ್ ನ ವಿಜೇತ ಕೇರಳದ 7 ವಷ೯ದ ಬಾಲಕ ಅವಿಭ೯ವ್ ಹಾಡುಗಾರಿಕೆ.
*ಕುಶಾಲನಗರ ಏಂಜಲ್ ವಿಂಗ್ಸ್ ತಂಡದಿಂದ ನೖತ್ಯ ವೈವಿಧ್ಯ.
*ಕೊಡಗು ಪತ್ರಕತ೯ರ ಸಂಘದಿಂದ ಸಂಗೀತ ರಸಮಂಜರಿ.
*ಮಡಿಕೇರಿಯ ನಾಟ್ಯ ನಿಕೇತನ ತಂಡದಿಂದ ನೖತ್ಯ ಸಂಗಮ.
*ಮಡಿಕೇರಿಯ ಕಿಂಗ್ಸ್ ಆಫ್ ಕೂಗ್೯ ತಂಡದಿಂದ ಡಾನ್ಸ್ ಧಮಾಕ.*ಟೀಮ್ ಆಫ್ ಡೆವಿಲ್ಸ್ ತಂಡದಿಂದ ನೖತ್ಯ.

ದಿನಾಂಕ: 08.10.2024 ಮಂಗಳವಾರ ರಂದು ಮಹಿಳೆಯರಿಂದ ವೈವಿಧ್ಯಮಯ ಕಾಯ೯ಕ್ರಮಗಳು:  7 ನೇ ವಷ೯ದ ಮಹಿಳಾ ದಸರಾ , ಮಡಿಕೇರಿ ನಗರಸಭಾ ಸದಸ್ಯೆಯರು, ಕೊಡಗು ಮಹಿಳಾ ಮತ್ತು ಮಕ್ಕಳ ಅಭಿವೖದ್ದಿ ಇಲಾಖೆ ಸಹಯೋಗದಲ್ಲಿ ಮಹಿಳಾ ದಸರಾ ಕಾಯ೯ಕ್ರಮಗಳು ನಡೆಯಲಿವೆ, ಅಂದು ಬೆಳಗ್ಗೆ 10 ಗಂಟೆಯಿಂದಲೇ ಮಹಿಳೆಯರಿಗಾಗಿ ವೈವಿದ್ಯಮಯ ಮನರಂಜನಾ ಸ್ಪಧೆ೯ಗಳು, ಆಯೋಜಿತವಾಗಿದೆ, ಕಣ್ಣಿಗೆ ಬಟ್ಟೆ ಕಟ್ಟಿ ಮೇಕಪ್ , ಮೆಹಂದಿ,ಹಾಕುವ ಸ್ಪಧೆ೯, ಸಾಂಪ್ರದಾಯಿಕ ಉಡುಗೆ ಸ್ಪದೆ೯, ಬಲೂನ್ ಗ್ಲಾಸ್ ಸ್ಪರ್ಧೆ . ಬಾಂಬ್ ಇನ್ ದಿ ಸಿಟಿ, ಅಜ್ಜಿ ಜೊತೆ ಮೊಮ್ಮಕ್ಕಳ ನಡಿಗೆ, ಗಾರ್ಭ ಡ್ಯಾನ್ಸ್ , ವಾಲಗತ್ತಾಟ್ , ನಾರಿಗೆ ಒಂದು ಸೀರೆ,, ಕಪ್ಪೆ ಜಿಗಿತ , ಕೇಶ ವಿನ್ಯಾಸ, ಒಂಟಿ ಕಾಲಿನ ಓಟದ ಸ್ಪಧೆ೯ಗಳು ಮಹಿಳೆಯರಿಗಾಗಿ ಆಯೋಜಿತವಾಗಿದೆ, . ವಿವಿಧ ಕಾರ್ಯಕ್ರಮಗಳು. ಬೆಂಗಳೂರಿನ ಹೇಮ ವೆಂಕಟ್ ಅವರಿಂದ ದಾರದಲ್ಲಿ ದುಗೆ೯ಯ ಚಿತ್ರರಚನೆಯ ಆಕಷ೯ಣೆ, ಪೊನ್ನಂಪೇಟೆಯ ರೇಖಾ ಶ್ರೀಧರ್ ತಂಡದಿಂದ ನೖತ್ಯ ಆಯೋಜಿಸಲ್ಪಟ್ಟಿದೆ.

ಸಂಜೆ 6 ಗಂಟೆಯಿಂದ ಸಾಂಸ್ಕೖತಿಕ ಕಾಯ೯ಕ್ರಮಗಳು: ರಿಯಾಲಿಟಿ ಶೋ , ಸರಿಗಮಪ ಕಲಾವಿದೆಯರಾದ ಸುರೇಖಾ, ರಮ್ಯ, ರೇಷ್ಮಾ, ಫ್ರಥ್ವಿ ಭಟ್, ಸ್ನೇಹ ನೀಲಪ್ಪ ಗೌಡ ಅವರಿಂದ ಗಾನ ಸುಧೆ.

ದಿನಾಂಕ: 09.10.2024  ಬುಧವಾರ ರಂದು ದಸರಾ ಕವಿಗೋಷ್ಟಿ – ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ

ಸಂಜೆ 6 ಗಂಟೆಯಿಂದ ಸಾಂಸ್ಕೖತಿಕ ಕಾಯ೯ಕ್ರಮಗಳು: 

*ಖ್ಯಾತ ಕಲಾವಿದೆ ಕೋಟೇರ ಯಾಮಿನಿ ಮುತ್ತಣ್ಣ ಮತ್ತು ತಂಡದಿಂದ ದೇವಿಮಾಗ೯ಂ ನೖತ್ಯ ರೂಪಕ.
*ಮಡಿಕೇರಿಯ ವಿಂಗ್ಸ್ ಆಫ್ ಫ್ಯಾಷನ್ ತಂಡದಿಂದ – ನೖತ್ಯ ಸೌರಭ.
*ಮೈಸೂರಿನ ಶ್ರೀ ಗುರು ಸಂಗೀತ ಸೇವಾ ಸಂಘದಿಂದ ಗಾನಸುಧೆ.
*ಮೈಸೂರಿನ ನಿತ್ಯನಿರಂತರ ವಿಶೇಷ ಚೇತನ ಮಕ್ಕಳಿಂದ ಕನಾ೯ಟಕ ವೈಭವ ನೖತ್ಯ ರೂಪಕ.
*ಮಂಗಳೂರಿನ ಯಶಸ್ವಿ ಡಾನ್ಸ್ ಗ್ರೂಪ್ ತಂಡದಿಂದ ಕಡಲ ಹಬ್ಬ ನೖತ್ಯ ವೈವಿಧ್ಯ.
*ಕೂಗ್೯ ಮೆಲೋಡೀಸ್ ತಂಡದಿಂದ ಸಂಗೀತ ರಸಮಂಜರಿ ಆಯೋಜಿತವಾಗಿದೆ.

ದಿನಾಂಕ:10.10.2024 ಗುರುವಾರ ರಂದು ಬೆಳಗ್ಗೆ 9.30 ಗಂಟೆಯಿಂದ ಕೊಡಗು ಜಿಲ್ಲಾ ಜಾನಪದ ಪರಿಷತ್ ಸಹಯೋಗದಲ್ಲಿ 5 ನೇ ವಷ೯ದ ಜಾನಪದ ದಸರಾ ಆಯೋಜಿತವಾಗಿದೆ, ಜಿಲ್ಲೆ ಮತ್ತು ಹೊರಜಿಲ್ಲೆಗಳ ಜಾನಪದ ಕಲಾತಂಡಗಳ ಜಾಥಾ ಜನರಲ್ ತಿಮ್ಮಯ್ಯ ವೖತ್ತದಿಂದ ಗಾಂಧಿ ಮೈದಾನದವರೆಗೆ ಸಾಗಲಿದ್ದು, ಕಲಾಸಂಭ್ರಮ ವೇದಿಕೆಯಲ್ಲಿ ಕಲಾತಂಡಗಳಿಂದ ವೈವಿಧ್ಯಮಯ ಜಾನಪದ ಕಲಾ ಪ್ರದಶ೯ನ ಆಯೋಜಿತವಾಗಿದೆ, ಇದೇ ಸಂದಭ೯ ಪೊನ್ನಚ್ಚನ ಮಧುಶೂದನ್ ಸಂಗ್ರಹದ ಜಾನಪದ ಪರಿಕರಗಳ ಪ್ರದಶ೯ನ ಕೂಡ ಆಯೋಜಿತವಾಗಿದೆ.

ಸಂಜೆ 6 ಗಂಟೆಯಿಂದ ಯುವದಸರಾ

ದಿನಾಂಕ: 11.10.2024 ರಂದು  ಆಯುಧ ಪೂಜಾ ಕಾರ್ಯಕ್ರಮ

ಸಂಜೆ 6 ಗಂಟೆಯಿಂದ ಸಾಂಸ್ಕೖತಿಕ ಕಾಯ೯ಕ್ರಮಗಳು: *ನಾಟ್ಯ ಕಲಾ ಡಾನ್ಸ್ ಸ್ಡುಡಿಯೋ ತಂಡದಿಂದ ಡಾವ್ಸ್ ಸಂಗಮ
*ಟೀಂ ಇಂಟೋಪೀಸ್ ವೀರಾಜಪೇಟೆ ತಂಡದಿಂದ ನೖತ್ಯವೈವಿಧ್ಯ
*ಮೈಸೂರಿನ ನಾದವಿದ್ಯಾಲಯ ಸಂಗೀತ ನೖತ್ಯ
*ಅಕಾಡೆಮಿ ತಂಡದಿಂದ ಮಹಿಷಾಸುರ ಮಧಿ೯ನಿ ನೖತ್ಯ
*ಮಡಿಕೇರಿಯ ಕಂಚಿಕಾಮಾಕ್ಷಿ ತಂಡದಿಂದ ನೖತ್ಯ
*ರಾತ್ರಿ 8.30 ಗಂಟೆಯಿಂದ ಖ್ಯಾತ ಹಿನ್ನಲೆ ಗಾಯಕ ಸಂಗೀತ ನಿದೇ೯ಶಕರಾದ ಅಜು೯ನ್ ಜನ್ಯ, ಮತ್ತು ರಾಜೇಶ್ ಕೖಷ್ಣನ್ , ಶಮಿತಾ ಮಲ್ನಾಡ್ ತಂಡದಿಂದ ಸಂಗೀತ ರಸಮಂಜರಿ

ದಿನಾಂಕ: 12.10.2024 ರಂದು ವಿಜಯದಶಮಿಯ ರಾತ್ರಿ ದಶಮಂಟಪಗಳ ಶೋಭಾಯಾತ್ರೆಯಲ್ಲಿ 10 ದೇವಾಲಯಗಳಿಂದ ಅಸುರಿ ಶಕ್ತಿಗಳ ಸಂಹಾರದೊಂದಿಗೆ ವಿವಧ ಭಂಗಿಗಳಲ್ಲಿ ವಿಜಯದ ಸಂದೇಶ ನೀಡುವ ದಶಮಂಟಪಗಳು ಶೋಭಾಯಾತ್ರೆಯಲ್ಲಿ ಇಡೀ ನಗರವನ್ನೆ ಪುಳಕಿತಗೊಳಿಸುತ್ತದೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಮಧ್ಯ ರಾತ್ರಿ 12ಗಂಟೆಯಿಂದ ಬೆಳಗ್ಗಿನವರೆಗೆ ವಾದ್ಯಗೋಷ್ಠಿಯೊಂದಿಗೆ 4 ಶಕ್ತಿ ದೇವತೆಗಳ ಕರಗಗಳ ನಗರ ಪ್ರದಕ್ಷಿಣೆ ಇರುತ್ತದೆ.

ದಿನಾಂಕ:13.10.2024 ರ ಮುಂಜಾನೆ ಸಾಂಪ್ರದಾಯದಂತೆ ಬನ್ನಿ ಕಡಿಯುವುದರ ಮೂಲಕ ದಸರಾ ಜನೋತ್ಸವಕ್ಕೆ ತೆರೆ ಬೀಳಲಿದೆ.

About ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.
5 1 vote
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments