ಕೊಡಗು ಮುಸ್ಲಿಂ ಕಪ್ ವಾಲಿಬಾಲ್: ಝೆಡ್ ವೈ ಸಿ ಕೊಟ್ಟಮುಡಿ ಚಾಂಪಿಯನ್, ಸ್ಟಾರ್ ಬಾಯ್ಸ್ ಗುಂಡಿಕೆರೆ ರನ್ನರ್ಸ್

Reading Time: 5 minutes

ಚೆಯ್ಯ0ಡಾಣೆ, ಜ 23. ಕೊಡಗು ಜಿಲ್ಲಾ ಮುಸ್ಲಿಂ ಸ್ಪೋಟ್ಸ್ ಮತ್ತು ಕಲ್ಚರಲ್ ಅಸೋಸಿಯೇಷನ್ ವತಿಯಿಂದ ವಿರಾಜಪೇಟೆ ತಾಲೂಕು ಮೈದಾನದಲ್ಲಿ ನಡೆಯುತ್ತಿರುವ 15 ನೇ ವರ್ಷದ ಜಿಲ್ಲಾ ಮಟ್ಟದ ಜಮಾಅತ್ ಗಳ ಹೊನಲು ಬೆಳಕಿನ ಕೊಡಗು ಮುಸ್ಲಿಂ ಕಪ್ ವಾಲಿಬಾಲ್ ರೋಚಕ ಪಂದ್ಯಾಟದಲ್ಲಿ ಝೆಡ್ ವೈ ಸಿ ಕೊಟ್ಟಮುಡಿ ತಂಡ ಚಾಂಪಿಯನ್ ಪಟ್ಟ ಮೂಡಿಗೆರಿಸಿ ಕೊಂಡಿತ್ತು. ಕಳೆದ ಬಾರಿಯ ಚಾಂಪಿಯನ್ ಸ್ಟಾರ್ ಬಾಯ್ಸ್ ಗುಂಡಿಕೆರೆ ತಂಡ ರನ್ನರ್ಸ್ ಗೆ ತೃಪ್ತಿ ಪಟ್ಟುಕೊಂಡರು.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/Ln5WiyAJxApLbTxD0ttgcU ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಮೈಸೂರು ಯೂನಿವರ್ಸಿಟಿ ಆಟಗಾರ ಕೊಟ್ಟಮುಡಿ ತಂಡದ ಸುಹೈಲ್ ನ ಬುರುಸಿನ ಹೊಡೆತಕ್ಕೆ ತತ್ತರಿಸಿದ ಸ್ಟಾರ್ ಬಾಯ್ಸ್ ಗುಂಡಿಕೆರೆ ತಂಡವನ್ನು 25-18 ಮತ್ತು 25-15 ಅಂಕಗಳಿಂದ ಮಣಿಸಿ ಚಾಂಪಿಯನ್ ಪ್ರಶಸ್ತಿ ಪಡೆದುಕೊಂಡರು.

ಇದಕ್ಕೂ ಮೊದಲು ನಡೆದ ಸೆಮಿಫೈನಲ್ ಪಂದ್ಯದಲ್ಲಿ ಸ್ಟಾರ್ ಬಾಯ್ಸ್ ಗುಂಡಿಕೆರೆ ತಂಡ ನಾಪೋಕ್ಲು’ ಎ ‘ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿತು. ಮತ್ತೊಂದು ಸೆಮಿಫೈನಲ್ ನಲ್ಲಿ ಝೆಡ್ ವೈ ಸಿ ಕೊಟ್ಟಮುಡಿ ತಂಡ ಕರಿಕೆ ತಂಡವನ್ನು ಸೋಲಿಸಿ ಫೈನಲ್ ಗೆ ಅರ್ಹತೆ ಗಿಟ್ಟಿಸಿ ಕೊಂಡರು.
ಪಂದ್ಯದುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ ಕೊಟ್ಟಮುಡಿ ತಂಡದ ಸುಹೈಲ್ ಉತ್ತಮ ಅಲ್ ರೌಂಡರ್ ಪ್ರಶಸ್ತಿ ಪಡೆದು ಕೊಂಡರೆ,
ಬೆಸ್ಟ್ ಡಿಪೆನ್ಸ್ ಪ್ರಶಸ್ತಿಯನ್ನು ಅದೇ ತಂಡದ ಇರ್ಷಾದ್, ಬೆಸ್ಟ್ ಬ್ಲಾಕರ್ ಪ್ರಶಸ್ತಿಯನ್ನು ಬಾಸಿತ್, ಬೆಸ್ಟ್ ಅಟ್ಯಾಕರ್ ಪ್ರಶಸ್ತಿಯನ್ನು ಗುಂಡಿಕೆರೆ ತಂಡದ ಬದ್ರುದ್ದಿನ್, ಬೆಸ್ಟ್ ಪಾಸರ್ ಪ್ರಶಸ್ತಿಯನ್ನು ಗುಂಡಿಕೆರೆ ತಂಡದ ಗಫೂರ್ ಪಡೆದುಕೊಂಡರು.

3 ಮತ್ತು 4 ಸ್ಥಾನಕ್ಕೆ ನಡೆದ ಪಂದ್ಯಾಟದಲ್ಲಿ ಕರಿಕೆ ತಂಡ ನಾಪೋಕ್ಲು ತಂಡವನ್ನು ಸೋಲಿಸಿ 3ನೇ ಸ್ಥಾನ ಪಡೆದು ಕೊಂಡರೆ ನಾಪೋಕ್ಲು 4 ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡರು.
ತೀರ್ಪುಗಾರರಾಗಿ ರಾಷ್ಟ್ರೀಯ ಮಟ್ಟದ ನುರಿತ ತೀರ್ಪುಗರಾದ ಸುನಿಲ್ ಕುಮಾರ್, ವಿಜೇಶ್, ಅಕಿಲ್, ಸುಜಿಲ್, ನಿಜಿಲ್ ಕಾರ್ಯನಿರ್ವಹಿಸಿದರು.
ವೀಕ್ಷಕ ವಿವರಣೆಯನ್ನು ಆಸೀಫ್ ಅಮ್ಮತ್ತಿ, ರಾಶೀದ್ ಕಡಂಗ, ನಾಸರ್ ಕರಿಕೆ, ಸುಹೈಲ್ ಗುಂಡಿಗೆರೆ ನಿರ್ವಹಿಸಿದರು.

ಸಮಾರೋಪ ಸಮಾರಂಭ:
ಕೊಡಗು ಜಿಲ್ಲೆ ಕ್ರೀಡೆಗೆ ಪ್ರಸಿದ್ಧವಾದ ಜಿಲ್ಲೆ ಎಂದು ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರು ಹಾಗು ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅಭಿಪ್ರಾಯಪಟ್ಟರು.
ಇವರು ವಿರಾಜಪೇಟೆಯಲ್ಲಿ ಆಯೋಜಿಸಿದ ಕೊಡಗು ಮುಸ್ಲಿಂ ಕಪ್ ವಾಲಿಬಾಲ್ ಪಂದ್ಯಾವಳಿಯಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.
ಗ್ರಾಮ ಪ್ರದೇಶದಿಂದ,ನಗರ ಪ್ರದೇಶದಿಂದ ಉತ್ತಮವಾದ ಪ್ರತಿಭೆಗಳಿಗೆ ಮುಂದಿನ ದಿನಗಳಲ್ಲಿ ಅವಕಾಶ ಸಿಗಬೇಕು, ಇಂತಹ ಕ್ರೀಡಾಕೂಟದಿಂದ ನಮ್ಮ ದೇಶದಲ್ಲಿ ಪ್ರತಿನಿಧಿಸುವ ಕ್ರೀಡಾಪಟುಗಳು ಹೊರಹೊಮ್ಮಲಿ ಎಂದು ಪಂದ್ಯಾಟಕ್ಕೆ ಶುಭ ಹಾರೈಸಿದರು.

ಕೊಡಗು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಲತೀಫ್ ಸುಂಟಿಕೊಪ್ಪ, ಕೊಡಗು ಮುಸ್ಲಿಂ ಕಪ್ ವಾಲಿಬಾಲ್ ಅಸೋಸಿಯೇಷನ್ ನ ಕೋಶಾಧಿಕಾರಿ ಹಾಗೂ ಹೊದ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಹಂಸ ಕೊಟ್ಟಮುಡಿ, ಮಾಜಿ ವಕ್ಫ್ ಬೋರ್ಡ್ ಅಧ್ಯಕ್ಷ ಅಬ್ದುಲ್ ರಹಮಾನ್ ನಾಪೋಕ್ಲು ಪಂದ್ಯಾಟಕ್ಕೆ ಶುಭ ಹಾರೈಸಿ ಮಾತನಾಡಿದರು.

ಸನ್ಮಾನ:
ಮೈಸೂರಿನಲ್ಲಿ ನಡೆದ ವಿಶೇಷ ಚೇತನರ 65 ಕೆಜಿ ವಿಭಾಗದ ಪಂಚ ಕುಸ್ತಿ ಸ್ವರ್ದೆಯಲ್ಲಿ ರಾಷ್ಟ ಮಟ್ಟಕ್ಕೆ ಆಯ್ಕೆಯಾದ ಅರೆಕಾಡು ಗ್ರಾಮದ ಹಸನ್ ಹಾಗೂ 25 ವರ್ಷದಿಂದ ವಿರಾಜಪೇಟೆ ಪಟ್ಟಣ ಪಂಚಾಯಿತಿಯಲ್ಲಿ ಪೌರ ಕಾರ್ಮಿಕ ಯಾಗಿ ಸೇವೆ ಸಲ್ಲಿಸುತ್ತಿರುವ ಗೌರಿ ಎಂಬವರಿಗೆ ಕೊಡಗು ಮುಸ್ಲಿಂ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಅಸೋಸಿಯೇಷನ್ ವತಿಯಿಂದ ಶಾಸಕರು ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಲಾಯಿತು.

ಕೊಡಗು ಮುಸ್ಲಿಂ ಸ್ಪೋಟ್ಸ್ ಮತ್ತು ಕಲ್ಚರಲ್ ಅಸೋಸಿಯೇಷನ್ ಅಧ್ಯಕ್ಷ ಪಿ.ಎ.ಹನೀಫ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಸ್ತವಿಕವಾಗಿ ಮಾತನಾಡಿ ಕಳೆದ 14 ವರ್ಷದಿಂದ ಆಯೋಜಿಸಿ ಕೊಂಡು ಬರುತ್ತಿರುವ ಕೊಡಗು ಜಿಲ್ಲಾ ಮುಸ್ಲಿಂ ವಾಲಿಬಾಲ್ ಪಂದ್ಯಾವಳಿಗೆ ಸರಕಾರದಿಂದ ಅನುದಾನ ಅಗತ್ಯವಿದೆ ಎಂದು ಹೇಳಿದರು.

ಈ ಸಂದರ್ಭ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ಕೊಡಗು ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಹಕೀ0, ಪಟ್ಟಣ ಪಂಚಾಯಿತಿ ಸದಸ್ಯರಾದ ಮೊಹಮ್ಮದ್ ರಾಫಿ,ಮತಿನ್,ದೇಚ್ಚಮ್ಮ,ಕಾಂಗ್ರೆಸ್ ರಾಜ್ಯ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಸಯ್ಯದ್ ಬಾವ, ಕೆ.ಡಿ.ಎಂ.ಎಸ್.ಸಿ.ಎ. ಸ್ಥಾಪಕ ಅಧ್ಯಕ್ಷ ಅಬ್ದುಲ್ ರಹ್ಮನ್ ಕೊಟ್ಟಮುಡಿ,ದಾನಿ ಲತೀಫ್ ಬೆತ್ರಿ, ನವೀನ್ ಪೊನ್ನ0ಪೇಟೆ,ಅತಿಫ್ ಮನ್ನಾ, ವಿರಾಜಪೇಟೆ ಉಪ ಠಾಣಾಧಿಕಾರಿ ಗಣಪತಿ, ರಫೀಕ್ ಕೊಲುಮಂಡ, ನಾಸರ್ ಪಾಲಿಬೆಟ್ಟ, ಮೈಸಿ ಕತ್ತಣಿರ, ಮನ್ಸೂರ್ ಅಲಿ,ಅಲೀರಾ ರಶೀದ್, ಹಂಸ ಅಮ್ಮತ್ತಿ, ಜಾಬಿರ್ ನಿಜಾಮಿ, ಜೋಕಿಂಬ್ ರಾಡಿಗ್ಸನ್, ಜಲೀಲ್,, ಕರೀಂ ಕಡಂಗ, ಹಂಸು ಎಡಪಾಲ,ಕೊಡಗು ಸ್ಪೋಟ್ಸ್ ಮತ್ತು ಕಲ್ಚರಲ್ ಅಸೋಸಿಯೇಷನ್ ಪದಾಧಿಕಾರಿಗಳು ಮತಿತ್ತರರು ಉಪಸ್ಥಿತರಿದ್ದರು. ಕೆ.ಡಿ. ಎಂ.ಎಸ್.ಸಿ.ಎ. ಪ್ರಧಾನ ಕಾರ್ಯದರ್ಶಿ ಎಂ.ಎಂ. ಇಸ್ಮಾಯಿಲ್ ಸ್ವಾಗತಿಸಿ ಅಬ್ದುಲ್ ರಹ್ಮನ್ (ಅಂದಾಯಿ)ಕಾರ್ಯಕ್ರಮ ನಿರೂಪಿಸಿದರು.

ಹಂಚಿಕೊಳ್ಳಿ
0 0 votes
Article Rating
Subscribe
Notify of
guest
1 Comment
Oldest
Newest Most Voted
Inline Feedbacks
View all comments
Latheef
Latheef
1 year ago

Superb

error: Content is protected !!
1
0
Would love your thoughts, please comment.x
()
x