ಕರಿಕೆ ಗ್ರಾಮದ ಆನೆಪಾರೆಯಲ್ಲಿ ಕಾಡಾನೆ ಹಾವಳಿ: ಸಮಸ್ಯೆ ಪರಿಹಾರಕ್ಕೆ ಗ್ರಾಮಸ್ಥರ ಮನವಿ

ಕರಿಕೆ: ಕರಿಕೆ ಗ್ರಾಮದ ಆನೆಪಾರೆ ಎಂಬಲ್ಲಿ ಕಾಡಾನೆ ಹಾವಳಿ ದಿನೇ ದಿನೇ ಹೆಚ್ಚಾಗಿದ್ದು, ರೈತರ ತೋಟಕ್ಕೆ ನುಗ್ಗಿ ಫಸಲು ಪಡೆವ ಅಡಿಕೆ-ತೆಂಗುಗಳನ್ನು ತುಂಡುಮಾಡಿ ತುಂಬಾ ನಷ್ಟವುಂಟುಮಾಡಿದೆ.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ರಧೀಶ್ ಎಂಬುವವರ 10 ಅಡಿಕೆ ಹಾಗೂ 2ತೆಂಗು ಮರ, ಜೋಸೆಫ್ ಎಂಬುವವರ 60 ಅಡಿಕೆಮರ, ಮನೋಜ್ ಎಂಬುವವರ 30 ಅಡಿಕೆ ಮರ, ಮೋಹನ ಎಂಬುವವರ 25 ಅಡಿಕೆಮರಗಳನ್ನು ನಾಶ ಮಾಡಿದೆ.

ಪ್ರತಿ ವರ್ಷ ಈ ಭಾಗದಲ್ಲಿ ಆನೆ ಹಾವಳಿಯಿಂದ ರೈತರು ಕಂಗಾಲಾಗಿದ್ದಾರೆ. ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಆದಷ್ಟು ಬೇಗ ಆನೆ ಕಂದಕವನ್ನು ನಿರ್ಮಿಸಿ ಕೊಟ್ಟು ಇಲ್ಲಿಯ ಜನರ ಸಂಕಷ್ಟವನ್ನು ನಿವಾರಿಸಿ ಕೊಡ ಬೇಕಾಗಿ ಸ್ಥಳೀಯ ರೈತರು ಹಾಗೂ ಗ್ರಾಮಸ್ಥರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ವರದಿ: ಶಿವಗಿರಿ ರಾಜೇಶ್, ಕರಿಕೆ

About ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments