ಮಲೆಯಾಳಂ ಭಾಷಿಕರ ಹೊನ್ನಿನ ಹಬ್ಬ ಓಣಂ

ಮಲೆಯಾಳಂ ಭಾಷಿಕರ ಹೊನ್ನಿನ ಹಬ್ಬ ಓಣಂ

ಓಣಂ ಮಲೆಯಾಳಿ ಭಾಷಿಕರ ಅತ್ಯಂತ ಮಹತ್ವದ ಹಬ್ಬ. ಈ ಹಬ್ಬವು ಕೇರಳದಲ್ಲಿ ಮಾತ್ರವಲ್ಲದೇ ಕೇರಳಿಯರು ಎಲ್ಲೆಲ್ಲ ವಾಸಿಸುತ್ತಾರೋ, ಅಲ್ಲೆಲ್ಲ ಓಣಂ ಹಬ್ಬದ ಸಂಭ್ರಮ ಮನೆಮಾಡಿರುತ್ತದೆ.

ಕೃಷಿಯ ಹಿನ್ನಲೆಯಲ್ಲಿ ಆಚರಿಸ್ಪಡುವ ಈ ಹಬ್ಬವು ಮಳೆ ಗಾಳಿಗೆ ದುಡಿದು ಬೆಂಡಾದ ಜೀವಗಳಿಗೆ ಸಂತಸ ಸಂಭ್ರಮವನ್ನೀಯುವ ಹಬ್ಬ. ಮಳೆಯ ಆರ್ಭಟದ ನಡುವೆ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರು ಕೆಲಸಗಳನ್ನೆಲ್ಲಾ ಮುಗಿಸಿ ನೆಮ್ಮದಿಯ ನಿಟ್ಟುಸಿರು ಬಿಟ್ಟು ಕೂರುವ ಕಾಲ. ಮಳೆಯಲ್ಲಿ ಮಿಂದೆದ್ದ ಪ್ರಕೃತಿಯಲ್ಲಿ ಹೊಸ ಪುಳಕ ಓಣಂ ಹಬ್ಬ ಶುಭ ಸೂಚಕವೂ ಹೌದು. ಮನೆಯನ್ನು ಸುಣ್ಣ ಬಣ್ಣಗಳನ್ನು ಬಳಿದು, ಮನೆಯ ಮುಂದಿನ ಅಂಗಳದಲ್ಲಿ ಹೂವಿನ ರಂಗೋಲಿಯನ್ನು ಹಾಕಿ, ಮದ್ಯದಲ್ಲಿ ದೀಪವನ್ನು ಬೆಳಗಿಸಿ, ಮನೆಯ ಸುತ್ತ-ಮುತ್ತ ಹೊಸ ಬಟ್ಟೆಗಳನ್ನು ಹಾಕಿಕೊಂಡು ಕೇಕೆ ಹಾಕಿಕೊಂಡು ಓಡಾಡುವ ಮಕ್ಕಳು… ತಮ್ಮ ಸಾಂಪ್ರದಾಯಕ ಉಡುಗೆಯಾಗ ಕ್ರೀಂ ಬಣ್ಣದ ಸೆಟ್ ಸ್ಯಾರಿ ಅಥವಾ ಸೆಟ್‌ಮುಂಡ್‌ಳನ್ನು ಧರಿಸಿ ವಿವಿಧ ಭಕ್ಷö್ಯ ಭೋಜನಗಳ ತಯಾರಿಕೆಯಲ್ಲಿ ನಿರತರಾಗಿರುವ ಹೆಂಗೆಳೆಯರು… ಇದು ಓಣಂ ಆಚರಿಸುವ ಮನೆಗಳಲ್ಲಿ ಸಾಧಾರಣವಾಗಿ ಕಂಡುಬರುವ ದೃಶ್ಯಗಳು.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಹಾಗೆ ನೋಡಿದರೆ ಓಣಂ ಹಬ್ಬ ಸಿಂಹ ಮಾಸದಲ್ಲಿ ಬರುತ್ತದೆ. ಈ ಸಿಂಹ ಮಾಸವು ಮಲೆಯಾಳಿಗಳ ಪಾಲಿಗೆ ಚಿನ್ನದ ಮಾಸ. ಸಿಂಹ ಮಾಸವು ಹಸ್ತ ನಕ್ಷತ್ರದಿಂದ ಹತ್ತು ದಿನಗಳ ಕಾಲ ಆಚರಣೆಯಲ್ಲಿರುತ್ತದೆ. ಕೊನೆಯ ಶ್ರಾವಣ ನಕ್ಷತ್ರದ ದಿನ ಬಹು ಮುಖ್ಯವಾಗಿದ್ದು, ಇದೇ ತಿರುವೋಣಂ.

ಓಣಂ ಆಚರಣೆಯ ಪೌರಾಣಿಕ ಹಿನ್ನೆಲೆಯನ್ನು ನೋಡುವುದಾದರೆ ಬಲಿ ಚಕ್ರವರ್ತಿ ರಾಕ್ಷಸನಾದರೂ, ಪ್ರಜೆಗಳ ಬಗ್ಗೆ ಕಾಳಜಿಯುಳ್ಳವನೂ, ವಾತ್ಸಲ್ಯವುಳ್ಳವನೂ, ಧರ್ಮಿಷ್ಟನೂ, ಮಹಾದಾಯೂ, ಮಹಾ ಪರಾಕ್ರಮಿಯೂ ಆಗಿದ್ದನು. ತನ್ನ ಪರಾಕ್ರಮದಿಂದ ವಿಶ್ವವನ್ನೆ ಸುತ್ತುವ ದೇವ ವಾಹನವನ್ನು ಪಡೆದಿದ್ದನು. ಆದರೆ ರಾಕ್ಷಸ ಕುಲದಲ್ಲಿ ಹುಟ್ಟಿದ ಬಲಿ ಚಕ್ರವರ್ತಿಗೆ ದೇವತೆಗಳ ಮೇಲೆ ಯುದ್ಧ ಸಾರಿ ಅವರನ್ನು ಬಗ್ಗು ಬಡಿದು ಇಂದ್ರ ಪದವಿಯನ್ನು ಪಡೆಯಬೇಕೆಂಬ ದುರಾಸೆ ಉಂಟಾಯಿತು. ಇದಕ್ಕಾಗಿ ಇಂದ್ರ ಪದವಿಯನ್ನು ಪಡೆಯುವುದಕ್ಕಾಗಿ ಮಹಾಯಾಗ ಮಾಡಲು ಮುಂದಾದನು. ಉಆವಾಗ ಬಲಿ ಚಕ್ರವರ್ತಿ ಮಹಾಯಾಗ ಮಾಡಲು ಹೊರಟಿರುವ ವಿಷಯ ದೇವತೆಗಳ ಕಿವಿಗೆ ಬಿತ್ತೋ ದೇವತೆಗಳು ನಡುಗಿ ಹೋದರು. ಇನ್ನು ನಮಗೆ ಉಳಿಗಾಲವಿಲ್ಲ, ಹೇಗಾದರೂ ಮಾಡಿ ನಮ್ಮನ್ನು ಕಾಪಾಡಿ ಎಂದು ವಿಷ್ಣುವಿನ ಮೊರೆ ಹೋದರು. ಇದನ್ನರಿತ ವಿಷ್ಣು ಬಿಯೊಂದಿಗೆ ನೇರವಾಗಿ ಯುದ್ಧ ಮಾಡುವ ಬದಲು ಉಪಾಯದಿಂದ ಸಂಹರಿಸುವ ತಂತ್ರ ರೂಪಿಸಿದ. ವಾಮನ ರೂಪದಲ್ಲಿ ಬಲಿ ಚಕ್ರವರ್ತಿಯ ಬಳಿಗೆ ಬರುತ್ತಾರೆ, ತನಗೆ ತಪಸ್ಸು ಮಾಡಲು ಮೂರು ಅಡಿ ಜಾಗವನ್ನು ನೀಡಬೇಕೆಂದು ಕೇಳುತ್ತಾರೆ. ಮಹಾದಾನಿಯಾದ ಬಲಿಚಕ್ರವರ್ತಿಗೆ ವಾಮನನನ್ನು ಕಂಡು ಕನಿಕರ ಉಂಟಾಗಿ ಜಾಗ ನೀಡಲು ಮುಂದಾಗುತ್ತಾರೆ. ಆಗ ರಾಕ್ಷಸ ಗುರು ಶುಕ್ರಾಚಾರ್ಯರಿಗೆ ವಾಮನ ರೂಪದಲ್ಲಿರುವ ವಿಷ್ಣುವಿನ ಅವತಾರ ತಿಳಿದು, ನೀನು ವಾಮನನಿಗೆ ಜಾಗ ನೀಡಲು ಹೋದುದೇ ಆದರೆ ನಿನ್ನ ಸರ್ವಸ್ವವನ್ನು ಕಳೆದುಕೊಳ್ಳುತ್ತೀಯಾ ಆದರಿಂದ ದಯವಿಟ್ಟು ಇದಕ್ಕೆ ಒಪ್ಪಬೇಡ ಎಂದು ಪರಿಪರಿಯಾಗಿ ಕೇಳಿಕೊಳ್ಳುತ್ತಾನೆ. ಅದಕ್ಕೆ ಬಲಿಚಕ್ರವರ್ತಿ ನಾನು ಕೊಟ್ಟಾö್ಮತಿಗೆ ತಪ್ಪಲಾರೆನೆಂದು, ನನ್ನ ಬಳಿಗೆ ದಾನಕ್ಕಾಗಿ ಬಂದವರನ್ನು ಬರಿ ಕೈಯಲ್ಲಿ ಕಳುಹಿಸಲಾರೆನೆಂದು, ಶುಕ್ರಚಾರ್ಯರ ಮಾತನ್ನು ಲೆಕ್ಕಿಸದೆ ತಪ್ಪಸ್ಸಿಗೆ ಸ್ಥಳ ನೀಡುತ್ತಾನೆ.

ಇದೇ ತಕ್ಕ ಸಮಯವೆಂದು ಕಾಯುತ್ತಿದ್ದ ಮಹಾವಿಷ್ಣು ತ್ರಿವಿಕ್ರಮನನಾಗಿ ಆಕಾಶದೆತ್ತರಕೆ ಬೆಳೆಯುತ್ತಾನೆ. ಅಲ್ಲದೆ ತನ್ನ ಒಂದು ಪಾದದಿಂದ ಭೂಮಿಯನ್ನು, ಇನ್ನೊಂದು ಪಾದದಿಂದ ಆಕಾಶವನ್ನು ಅಳೆದು ಇನ್ನೊಂದು ಪಾದವನ್ನು ಎಲ್ಲಿ ಇಡಲಿ ಎಂದು ಕೇಳಲು ಮಹಾದಾನಿಯಾದ ಬಲಿಚಕ್ರವರ್ತಿ ಮಾತಿಗೆ ತಪ್ಪದೆ ಯನ್ನ ಶಿರವನ್ನು ತೋರಿಸುತ್ತಾನೆ. ಅದರಂತೆ ವಾಮನ ಅವತಾರದಲ್ಲಿದ್ದ ವಿಷ್ಣು ಆತನ ತಲೆ ಮೇಲೆ ಪಾದವನ್ನಿಡುತ್ತಿದ್ದಂತೆ ಬಿಚಕ್ರವರ್ತಿ ಪಾತಾಳ ಸೇರುತ್ತಾನೆ.ಆದರೆ ಅದಕ್ಕಿಂತ ಮೊದಲು ವರ್ಷಕ್ಕೊಮ್ಮೆ ಪ್ರಜೆಗಳನ್ನು ನೋಡಲು ಅನುಮತಿಯನ್ನು ಕೋರುತ್ತಾನೆ. ಅದರಂತೆ ಇಂದಿಗೂ ತಿವೋಣಂ ದಿನ ಬಲಿಚಕ್ರವರ್ತಿ ಪ್ರಜೆಗಳನ್ನು ನೋಡಲು ಬರುತ್ತಾನೆ ಎಂಬ ನಂಬಿಕೆಯಿAದ ಮನೆಯಲ್ಲಿರುವವರು ಹೊಸ ಬಟ್ಟೆಗಳನ್ನು ಧರಿಸಿ, ಮನೆಮುಂದಿರುವ ಅಂಗಳದಲ್ಲಿ ಹೂವಿನ ರಂಗೋಲಿಯನ್ನು ಹಾಕಿ, ಮಧ್ಯೆ ದೀಪವನ್ನಿಟ್ಟು, ವಿವಿಧ ಭಕ್ಯಭೋಜನಗಳನ್ನು ಮಾಡಿ ಕುಟುಂಬದವರೊಡನೆ, ನೆಂಟರು ಇಷ್ಟರನ್ನು ಗೆಳೆಯ ಗೆಳತಿಯರನ್ನು ಕರೆದು ಒಟ್ಟಿಗೆ ಕುಳಿತು ಸಂತೋಷದಿAದ ಊಟಮಾಡುತ್ತಾರೆ. ನಂತರ ಹೆಚ್ಚಿನವರು ಊರ ಮೈದಾನದಲ್ಲಿ ಸೇರಿ ಮನರಂಜನೆಯಲ್ಲಿ ತೊಡಗುತ್ತಾರೆ. ಗಂಡಸರು ಚೆಂಬಾಟ, ಕರಡಿಯಾಟ, ಗಿಳಿಯಾಟ ದಂತಹ ಆಟವಾಡಿದರೆ ಮಕ್ಕಳು ಕುಮ್ಮಿಯಾಟ, ಉಯ್ಯಾಲೆ, ತುಂಬಿತುಳ್ಳಲ್ಲ್, ತಿರುವಾದಿರಕಳಿ ಇತ್ತಯಾದಿಯಾಗಿ ಆಡಿದರೆ ಮಹಿಳೆಯರು ಉಯ್ಯಾಲೆ, ತಿರಿವಾದಿರಕಳಿಯಂತಹ ಆಟವನ್ನು ಆಡುತ್ತಾರೆ. ಇದೇ ಸಂದರ್ಭದಲ್ಲಿ ಜಲೋತ್ಸವ(ವಳ್ಳಂಕಳಿ)ಯೂ ನಡೆಯುತ್ತದೆ. ಪ್ರತಿ ಊರಿನಲ್ಲಿರುವ ಬಡವ, ಬಲ್ಲದರೆನ್ನದೆ ಇಲ್ಲರೂ ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು ಹತ್ತು ದಿನಗಳನ್ನು ಸಂತೋಷದಿಂದ ಕಳೆಯುತ್ತಾರೆ.

✍. ಕಾನತ್ತಿಲ್ ರಾಣಿ ಅರುಣ್

ಕಾನತ್ತಿಲ್‌ ರಾಣಿ ಅರುಣ್‌

0 0 votes
Article Rating
Subscribe
Notify of
guest
0 Comments
Inline Feedbacks
View all comments