ತಾಳ್ಮೆ ಇಲ್ಲದ ನಿರ್ದೇಶಕನ ಅಸಂಗತ (ಅಭ್ಸರ್ಡ್)‌ ಸಿನೆಮಾ ಮಕ್ಕಡ ಮನಸ್ಸ್‌

ತಾಳ್ಮೆ ಇಲ್ಲದ ನಿರ್ದೇಶಕನ ಅಸಂಗತ (ಅಭ್ಸರ್ಡ್)‌ ಸಿನೆಮಾ

ಮಕ್ಕಡ ಮನಸ್ಸ್‌

ಕೊಡವ ಭಾಷಾ ಸಿನೇಮಾಗಳು ಇತ್ತೀಚೆಗೆ ಹೊಸ ಹೊಸ ಪ್ರಯೋಗದೊಂದಿಗೆ ತೆರೆಕಾಣುತ್ತಿದೆ. ಅದರಲ್ಲಿ “ಭಾವ ಬಟ್ಟೆಲ್‌” ಸಿನೆಮಾ ಪ್ರಯೋಗಕ್ಕೆ ಒಗ್ಗಿಕೊಂಡ ಮೊದಲ ಸಿನೆಮಾವಾದರೆ. ಆನಂತರದ್ದು ಶ್ರೀ ಸೋಲೋಮನ್‌ ನಿರ್ದೇಶನದ “ಮಕ್ಕಡ ಮನಸ್ಸ್‌”‌ ಎರಡು ಗಂಟೆಯ ಅವದಿಯಲ್ಲಿ ನಾಲ್ಕು ಹಾಡುಗಳಿರುವ ಸಿನೆಮಾದಲ್ಲಿ “ಹಾರೋ ಹಕ್ಕಿ ಆಗೋಣ ಬಾ” ಕನ್ನಡ ಹಾಡು ಕೇಳಲು ಇಂಪಾಗಿದೆಯಲ್ಲದೆ ಇಡೀ ಹಾಡಿನ ದೃಶ್ಯ ನೋಡುಗರನ್ನು ಹಿಡಿದಿಟ್ಟುಕೊಳ್ಳುತ್ತದೆ. ಅಂತಹ ಶಕ್ತಿ ಅ ಹಾಡಿಗೆ ಇದೆ.

ಇದೇ 03-02-2020 ರಂದು ಪೊನ್ನಂಪೇಟೆ ಕೊಡವ ಸಮಾಜದ ಕಟ್ಟಡದಲ್ಲಿ ವ್ಯವಸ್ಥಿತವಾಗಿ ಥಿಯೇಟರೀಸಿಕೊಂಡು ಪ್ರದರ್ಶನ ಕಾಣುತ್ತಿದೆ. ಥಿಯೇಟರ್ ಅಭಾವವಿರುವ ಈ ಕಾಲಗಟ್ಟದಲ್ಲಿ ಶ್ರಮಪಟ್ಟು ಮಾಡಿದ ಸಿನಿಮಾವನ್ನು ಜನರ ಬಳಿ ಕೊಂಡೂಯ್ದು ಥಿಯೇಟರ್‌ ಅನುಭವನ್ನೇ ಕೊಡಗಿಗೆ ಮೊದಲು ಪರಿಚಯಿಸಿದ್ದು “ತಳ್‌ಂಗ್ ನೀರ್”‌ ಕೊಡವ ಸಿನೆಮಾ ತಂಡ. ಈ ಸಂಚಾರಿ ಥಿಯೇಟರ್‌ನ ಉಸ್ತುವಾರಿ ಸುಲಭವೇನಲ್ಲ ಅದನ್ನ ಅನುಭವವಿಸಿದವರಿಗೇ ಗೊತ್ತು ಅದರ ಪಾಡು.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಹಾಗೆಯೇ “ತಳ್‌ಂಗ್ ನೀರ್‌” ಮತ್ತೊಂದು ಸಂಸ್ಕೃತಿಯನ್ನು ಕೊಡಗಿಗೆ ಪರಿಚಯಿಕೊಟ್ಟು ಹೋಗಿ ತಾನು ಮಾತ್ರ ಇಲ್ಲಿನ ಸಿನಿಮಾಭಿಮಾನಿಗಳ ಮನಸ್ಸಲ್ಲಿ ಉಳಿದು ಕೊಂಡಿದೆ.

ಪ್ರತೀ ಪ್ರದರ್ಶನದ ಕೊನೆಯಲ್ಲಿ ಪ್ರೇಕ್ಷಕರೊಂದಿಗೆ ಸಂವಾದ ಕಾರ್ಯಕ್ರಮ ನಡೆಸಿಕೊಟ್ಟದ್ದು, ಇದೀಗ ತೆರೆಕಾಣುತ್ತಿರುವ ನೂತನ ಸಿನೆಮಾಗಳು ಸಂವಾದ ಸಂಸ್ಕೃತಿಯನ್ನು ಮುಂದುವರೆಸಿಕೊಂಡು ಬಂದಿವೆ.

ಕ್ರಿ.ಶ. 1830-32 ರಲ್ಲಿ ಕೊಡಗಿಗೆ ಕ್ರೈಸ್ತ ವಿದ್ಯಾಸಂಸ್ಥೆಗಳು ಅಕ್ಷರ ಕಲಿಸಲು ಮುಂದಾದವು. ಅದಕ್ಕಿಂತ ಮೊದಲು “ಕೈ ಮಠ” ಎಂಬ ಅಕ್ಷರ ದಾಸೋಹ ಚಾವಡಿಗಳು ಅಲ್ಲೊಂದು ಇಲ್ಲೊಂದು ನಡಿಯುತ್ತಿತ್ತು. ನಮ್ಮ ಹೆಮ್ಮೆಯ ಶ್ರೀ ಅಪ್ಪನೆರವಂಡ ಹರದಾಸ ಅಪ್ಪಚ್ಚ ಕವಿ ಕೂಡ “ಕೈ ಮಠ” ದಲ್ಲಿ ಅಕ್ಷರ ತಿದ್ದಿದ್ದಾರೆ.

ಆ ಸಂದರ್ಭದಲ್ಲಿ ಅಕ್ಷರ ಹಸಿವಿರುವ ಕೆಲವರು ಉಚಿತ ವಿದ್ಯಾಭ್ಯಾಸಕ್ಕಾಗಿ ಕೊರಳಿಗೆ ಶಿಲುಭೆ ಏರಿಸಿಕೊಂಡು ಅಕ್ಷರ ಕಲಿತು ಅಕ್ಷರದಿಂದ ಅನ್ನ ಸಂಪಾದಿಸಿಕೊಳ್ಲಲು ಆರಂಭಿಸಿದ ನಂತರ ಶಿಲುಭೆಯನ್ನ ಕಳಚಿಟ್ಟ ಘಟನೆ ಕೊಡಗಿನ ಚರಿತ್ರೆಯಲ್ಲಿ ನಡೆದುಹೊದದ್ದನ್ನು ಕೆಲ ಹಿರಿಯರು ಈ ಸ್ವಾರಸ್ಯಕರ ಘಟನೆಯನ್ನು ಅಲ್ಲಿ ಇಲ್ಲಿ ಹೇಳಿ ಉಳಿಸಿ ಹೋಗಿದ್ದಾರೆ.

ಕೊಡವ ಬಾಷಾ ಸಿನಿಮಾ ಎಂದಾಗಲೆ ಜನಮನದ ಮನಸ್ಸಲ್ಲಿ ಪ್ರತಿಫಲಿಸುವುದು ಕೊಡವ ನೇಟಿವಿಟಿ ಬಗ್ಗೆ “ಮಕ್ಕಡ ಮನಸ್ಸ್‌” ಸಿನಿಮಾ ಮಾತ್ರ ಹೇಳ ಹೊರಟಿರುವುದು ಒಂದು ಉತ್ತಮ ಸಂದೇಶವನ್ನು.

ಬಡತನದಲ್ಲಿ ಅಕ್ಷರ ಕಲಿಯುವ ಹಿಂದಿನ ಕಷ್ಟಗಳು, ಅಪ್ಪ ಅಮ್ಮನ ಕಷ್ಟಗಳನ್ನು ಮಕ್ಕಳ ಕಣ್ಣಿಗೆ ಸಿನಿಮಾ ಕಟ್ಟಿಕೊಡುತ್ತದೆ. ಹಾಗೆಯೇ ಸ್ನೇಹಿತರ ಸಂಬಂಧ, ಶಿಕ್ಷಕರು ಮಕ್ಕಳ ಮನಸ್ಸುಗಳನ್ನು ಅರಿತುಕೊಳ್ಳುವುದರ ಬಗ್ಗೆ ಕೂಡ ಒಳ್ಳೆಯ ಸಂದೇಶವನ್ನು ನೀಡಿದೆ.

ದೇವಯ್ಯ ಪಾತ್ರದಲ್ಲಿ ಸಿನಿಮಾದ ಹೀರೊವಾಗಿ ಉತ್ತಮ ಅಭಿನಯ ನೀಡುತ್ತಾ ಪಾತ್ರ ಮಲೆಯಾಳಮಯವಾಗಿರುವುದು ಈ ಕೊಡವ ಸಿನೆಮಾದ ದುರಂತ.

ಚಾಚರಣಿಯಂಡ ಅಪ್ಪಣ್ಣ, ಕೋಟ್ಟ್‌ಕತ್ತಿರ ಪ್ರಕಾಶ್‌, ವಾಂಚಿರ ಜಯ, ವಾಂಚಿರ ನಾಣಯ್ಯ ಮುಂತಾದವರು ಮಕ್ಕಡ ಮನಸ್ಸ್ ‌ ಸಿನೆಮಾ ಕೊಡವ ಸಿನೆಮಾ ಎಂಬುದಕ್ಕೆ ಸಾಕ್ಷಿಗಳಾಗಿದ್ದಾರೆ.

ಸಂದರ್ಭವಲ್ಲದ ಸಂದರ್ಭದಲ್ಲಿ ಕೊಡವ ಜನಪದ ಸೊಗಡನ್ನು ಅನುಉದ್ದೇಶ ಪೂರ್ವಕವಾಗಿ ತೋರಿಸುತ್ತಾ ಕೊಡವ ಸಿನಿಮಾ ಎಂದು ಒತ್ತಾಯ ಪೂರ್ವಕವಾಗಿ ನಿರ್ದೇಶಕರು ಪ್ರತಿಪಾದನೆ ಮಾಡಲು ಹೊರಟಂತಿದೆ.

ಸರಕಾರಿ ಮಾದರಿ ಶಾಲೆಗಳನ್ನು ಮತ್ತು ಕ್ರೈಸ್ತ ಶಿಕ್ಷಣ ಕೇಂದ್ರಗಳನ್ನು ಸಮೀಕರಿಸುವಲ್ಲಿ ನಿರ್ದೇಶಕರು ತುಂಬಾ ಶ್ರಮವಹಿಸಿದ್ದಾರೆ ಎಂದರೆ ಎಳ್ಳಷ್ಟು ತಪ್ಪಾಗಲಿಕ್ಕಿಲ್ಲ.

ಇಡೀ ಸಿನಿಮಾದ ಉದ್ದಕ್ಕೂ ಮಕ್ಕಳ ಮನಸ್ಸನ್ನು ಹೇಳುವ ಪ್ರಯತ್ನದೊಂದಿಗೆ ಇದು ಕೊಡವ ಸಿನಿಮಾ, ಇದೂ ಕೊಡವ ಸಿನಿಮಾ ಎಂದು ಒತ್ತಾಯ ಪೂರ್ವಕವಾಗಿ ಹೇಳ ಹೊರಟಿರುವುದು ಎಲ್ಲಾ ಪ್ರಬುದ್ದ ಸಿನಿವೀಕ್ಷರು ಗಮನಿಸಿಕೊಂಡಿದ್ದಾರೆ.

ಸರಕಾರಿ ಶಾಲೆಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಬಹುತೇಕರು ಶ್ರಮ ಪಡುತ್ತಿರುವ ಸಂದರ್ಭದಲ್ಲಿ. ಕ್ರೈಸ್ತ ಮಿಷನರಿಯೊಂದಿಗೆ ಸರಕಾರಿ ಶಾಲೆಗಳನ್ನು ಸಮೀಕರಿಸಿರುವುದು ಯಾವ ಪುರುಷಾರ್ಥಕ್ಕೋ ಅರ್ಥವಾಗುವುದಿಲ್ಲ.

ಜತೆ ಜತೆಯಲ್ಲಿ ಹಳ್ಳಿಗಾಡಿನ ಮಕ್ಕಳು ಶಾಲೆಗೆ ಹೋಗುವ ಕಷ್ಟಗಳನ್ನೂ ಹೇಳುವ ಪ್ರಯತ್ನ ಮಾಡುತ್ತಾ ಕನ್ನಡಕ್ಕೆ ಪ್ರಾಮುಖ್ಯತೆ ಕೊಡಬೇಕೆಂದೂ ಕ್ಷೀಣವಾಗಿ ಹೇಳುತ್ತಾರೆ.

ದೇವಯ್ಯ ಕುಟುಂಬದಲ್ಲಿ ಗಂಡು ಮಗುವನ್ನು ಕ್ರೈಸ್ತ ವಿದ್ಯಾ ಸಂಸ್ಥೆಗೆ ಸೇರಿಸಿ ಹೆಣ್ಣು ಮಗುವನ್ನು ಸರಕಾರಿ ಶಾಲೆಗೆ ಕಳುಹಿಸಿರುವುದು ಗಂಡು-ಹೆಣ್ಣಿನ ಬಗ್ಗೆ ಇರುವ ಅಸಮಾನತೆಯನ್ನೂ ಸೂಕ್ಷ್ಮವಾಗಿ ದಾಖಲೀಕರಿಸಿದ್ದಾರೆ ಎಂದು ಅನಿಸುತ್ತದೆ.

ಹೆಮ್ಮೆಯ ಕ್ರೀಡಾ ಪಟುಗಳಾದ ಅರ್ಜುನ್‌ ದೇವಯ್ಯ ಮತ್ತು ಅಶ್ವಿನಿ ನಾಚಪ್ಪರಿಂದ ಸ್ಪೂರ್ತಿಪಡೆದ ಚಿತ್ರವೆಂಬುದನ್ನು ಒತ್ತಿಹೇಳಲು ಕ್ರೈಸ್ತ ಶಾಲೆಯಲ್ಲಿ ಸ್ಪರ್ಧೆಯ ಕೊನೆಯ ಕ್ಷಣದಲ್ಲಿ ಅವಕಾಶವಂಚಿತವಾಗುವ ವಿದ್ಯಾರ್ಥಿ ಮತ್ತು ಸಿನೇಮಾದಲ್ಲಿ ರೇಸಿನಲ್ಲಿ ಮರಣದಂಡನೆಗೆ ಒಳಗಾದ ಕುದುರೆಯೊಂದು ಪ್ರವೇಶಿಸಿ ವಿದ್ಯಾರ್ಥಿಗಳಿಗೆ ಸ್ಪೂರ್ತಿ ಕೊಡುವಲ್ಲಿ ನಿಜಕ್ಕೂ ಮೋಸಮಾಡಿಲ್ಲ.

ಕುಡುಕ ತಂದೆಯಂದಿರಿಂದ ಮಕ್ಕಳ ಮನಸ್ಸು ಹೇಗೆ ಕೆಡುತ್ತದೆ ಎಂಬುದನ್ನು ಹೇಳುತಾ ತಂದೆಯರು ಮೈಪರಚಿಕೊಳ್ಳುವಂತೆ ಮಾಡಿ ಸರಿ ದಾರಿಗೆ ತರುವ ಪ್ರಯತ್ನವನ್ನೂ ಮಾಡಿದ್ದಾರೆ.

ಸರಕಾರಿ ಶಾಲೆಗಳಲ್ಲಿ ಅಡ್ಡಾಡಿದ ನಿರ್ದೇಶಕರ ಕ್ಯಾಮರಾ ಕ್ರೈಸ್ತ ಶಾಲಾ ಸಂಸ್ಥೆಯಲ್ಲಿ ಡ್ರೋನ್‌ ಕ್ಯಾಮಾರದೊಂದಿಗೆ ವೈಭವೀಕರಿಸಿ ಚಿತ್ರಿಸಿ ಸರಕಾರಿ ಶಾಲೆಗಳನ್ನು ಅಲ್ಲಿಯ ಶಿಕ್ಷಕರನ್ನು ಮೂಲೆ ಗುಂಪಾಗಿಸುವ ಪ್ರಯತ್ನ “ಮಕ್ಕಡ ಮನಸ್ಸ್‌” ಕೊಡವ ಸಿನಿಮಾದಲ್ಲಿದೆ.

ಅನವಶ್ಯಕವಾಗಿ ಎರಡು ಗಂಟೆ ಎಳೆದಿರುವ ಸಿನೆಮಾವು ಮುಗ್ದ ಮನಸ್ಸಿನ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರುಗಳಿಗೆ ಒಳ್ಳೆಯ ಸಂದೇಶವನ್ನು ನೀಡಿದೆ ಎಂಬುದರಲ್ಲಿ ಎರಡು ಮಾತಿಲ್ಲ.

ಸಿನೆಮಾವಾಗಿ ಒಳ್ಳೆಯ ಸಂದೇಶ ಹೊತ್ತಿರುವ ಅತ್ಯುತ್ತಮ ಆರ್ಟ್‌ ಮೂವಿಯಾಗಬಲ್ಲ ಎಲ್ಲಾ ಲಕ್ಷಣಗಳಿರುವ “ಮಕ್ಕಡ ಮನಸ್ಸ್”‌, ಕೊಡವ ಸಿನೆಮಾ ಎಂದು ಬಿಂಬಿಸುವ ಓತ-ಪ್ರೇತ ತನದಲ್ಲಿ ಇದು ಸಿನೆಮಾವೊ? ಕೊಡವ ಸಿನೆಮಾವೋ? ಎಂಬ ಪ್ರಶ್ನೆಯಾಗೇ ಉಳಿದು ಕೊಳ್ಳುತ್ತದೆ.

ಲೇಖಕರು: ✍. ಅಲ್ಲಾರಂಡ ವಿಠಲ್ ನಂಜಪ್ಪ

admin

0 0 votes
Article Rating
Subscribe
Notify of
guest
0 Comments
Inline Feedbacks
View all comments