“ಭಾರತ ಖನಿಜಗಳ ಪಟ್ಟಿ” ಅನಾವರಣಗೊಳಿಸಲಿದ ಗಣಿ ಸಚಿವಾಲಯ

(ಸಾಂದರ್ಭಿಕ ಚಿತ್ರ)

ಕ್ರಿಟಿಕಲ್ ಮಿನರಲ್ ಪಟ್ಟಿಯು ಕಾರ್ಯತಂತ್ರದ ವಲಯಗಳ ಬೆಳವಣಿಗೆಗೆ ನಿರ್ಣಾಯಕವಾಗಿದೆ

ಆಮದು ಅವಲಂಬನೆಗಳನ್ನು ಕಡಿಮೆಗೊಳಿಸುವುದು ಹಾಗೂ ಪೂರೈಕೆ ಸರಪಳಿಯ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸಲು ಮತ್ತು ದೇಶದ ನಿವ್ವಳ ಉದ್ದೇಶಗಳನ್ನು ಬೆಂಬಲಿಸಲು ಗಣಿ ಸಚಿವಾಲಯದ ಮೂಲಕ ಕೇಂದ್ರ ಸರ್ಕಾರವು ಇದೇ ಮೊದಲ ಬಾರಿಗೆ “ಭಾರತಕ್ಕೆ ಕ್ರಿಟಿಕಲ್ ಖನಿಜಗಳ ಪಟ್ಟಿಯನ್ನು” ಅನಾವರಣಗೊಳಿಸಲು ಮುಂದಾಗಿದೆ. ಈ ಖನಿಜ ಪಟ್ಟಿಯನ್ನು ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಪ್ರಹ್ಲಾದ್ ಜೋಶಿ ಅವರು, ಗಣಿ, ಕಲ್ಲಿದ್ದಲು ಮತ್ತು ರೈಲ್ವೆ ರಾಜ್ಯ ಸಚಿವ ಶ್ರೀ ರಾವ್ ಸಾಹೇಬ್ ಪಾಟೀಲ್ ದಾನ್ವೆ ಮತ್ತು ಇತರ ಗಣ್ಯರ ಸಮ್ಮುಖದಲ್ಲಿ ಬಿಡುಗಡೆ ಮಾಡಲಿದ್ದಾರೆ. ನವದೆಹಲಿಯ ಇಂಡಿಯಾ ಇಂಟರ್ನ್ಯಾಷನಲ್ ಸೆಂಟರ್ನಲ್ಲಿ ಮುಂದಿನ ಆಗಸ್ಟ್ 28ರಂದು ನಡೆಯಲಿರುವ ಸಮಾರಂಭದಲ್ಲಿ ಈ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು.

ಕಾರ್ಯಕ್ರಮದಲ್ಲಿ ವಿದೇಶಿ ಗಣ್ಯರು, ಉದ್ಯಮ ಪ್ರತಿನಿಧಿಗಳು, ವಿಷಯ ತಜ್ಞರು ಮತ್ತು ಹಿರಿಯ ಅಧಿಕಾರಿಗಳು ಸೇರಿದಂತೆ ಪ್ರಮುಖ ಗಣ್ಯರು ಭಾಗವಹಿಸಲಿದ್ದಾರೆ. ಕ್ರಿಟಿಕಲ್ ಮಿನರಲ್ಸ್ ಪಟ್ಟಿಯ ಪ್ರಮುಖ ಮುಖ್ಯಾಂಶಗಳನ್ನು ಕಿರು ಸಾಕ್ಷ್ಯಚಿತ್ರ ಮೂಲಕ ಪ್ರಸ್ತುತಪಡಿಸಲಾಗುವುದು ಮತ್ತು ಸಮಾರಂಭದಲ್ಲಿ ಕೆಲವು ಪ್ರಮುಖ ಖನಿಜಗಳನ್ನು ಪ್ರದರ್ಶಿಸಲಾಗುತ್ತದೆ.

ಭಾರತದ ಸ್ವಾವಲಂಬನೆ ಮತ್ತು ಖನಿಜ ಸಂಪನ್ಮೂಲಗಳ ಡೊಮೇನ್ನಲ್ಲಿ ಭದ್ರತೆಯ ಅನ್ವೇಷಣೆಯಲ್ಲಿ ಇದು ಪ್ರಮುಖ ಮೈಲಿಗಲ್ಲು ಆಗಲಿದೆ. ಹೈಟೆಕ್ ಎಲೆಕ್ಟ್ರಾನಿಕ್ಸ್, ದೂರಸಂಪರ್ಕ, ಸಾರಿಗೆ ಮತ್ತು ರಕ್ಷಣೆಯಂತಹ ವಿವಿಧ ಕೈಗಾರಿಕಾ ವಲಯಗಳಿಗೆ ಅಗತ್ಯವಾದ ಖನಿಜಗಳನ್ನು ಗುರುತಿಸಲು ಮತ್ತು ಆದ್ಯತೆ ನೀಡಲು ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಗಣಿಗಾರಿಕೆ ವಲಯದಲ್ಲಿ ನೀತಿ ನಿರೂಪಣೆ, ಕಾರ್ಯತಂತ್ರದ ಯೋಜನೆ ಮತ್ತು ಹೂಡಿಕೆ ನಿರ್ಧಾರಗಳಿಗೆ ಈ ಪಟ್ಟಿಯು ಮಾರ್ಗದರ್ಶಿಯಾಗಿಯೂ ಕಾರ್ಯನಿರ್ವಹಿಸುತ್ತದೆ. ಈ ಉಪಕ್ರಮವು ದೃಢವಾದ ಮತ್ತು ಸ್ಥಿತಿಸ್ಥಾಪಕ ಖನಿಜ ವಲಯವನ್ನು ರಚಿಸುವ ಸರ್ಕಾರದ ಬದ್ಧತೆಯ ಮೂಲಕ ಭಾರತಕ್ಕೆ ‘ನಿವ್ವಳ ಶೂನ್ಯ’ ಗುರಿಯನ್ನು ಸಾಧಿಸುವ ದೂರದೃಷ್ಟಿ ಹೊಂದಿದೆ. ನಿರ್ಣಾಯಕ ಖನಿಜ ಪೂರೈಕೆ ಸರಪಳಿಗಳನ್ನು ಹೆಚ್ಚಿಸಲು ಭಾರತವು ಇತ್ತೀಚೆಗೆ ಅಸ್ಕರ್ ಮಿನರಲ್ ಸೆಕ್ಯುರಿಟಿ ಪಾಲುದಾರಿಕೆಯಲ್ಲಿ (MSP) ಹೊಸ ಪಾಲುದಾರ ಆಗಿರುವುದು ಗಮನಿಸಬೇಕಾದ ಅಂಶವಾಗಿದೆ.

0 0 votes
Article Rating
Subscribe
Notify of
guest
0 Comments
Inline Feedbacks
View all comments